Advertisement

Udupi: ಭಗವಾನ್ ನಿತ್ಯಾನಂದ ಮಂದಿರ-ಮಠ; ವರ್ಧಂತಿ ಉತ್ಸವ ಆಮಂತ್ರಣ ಪತ್ರಿಕೆಯ ಬಿಡುಗಡೆ

12:56 PM Jan 07, 2024 | Team Udayavani |

ಉಡುಪಿ: ಉಡುಪಿಯ ಶ್ರೀ ಭಗವಾನ್ ನಿತ್ಯಾನಂದ ಮಂದಿರ-ಮಠದ ಪ್ರಥಮ ವರ್ಧಂತಿ ಉತ್ಸವ, ಸದ್ಗುರುಗಳ ಪ್ರಾಣ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮಂದಿರ-ಮಠದಲ್ಲಿ ನಡೆಯಿತು.

Advertisement

ಪತ್ರಿಕೆ ಸದ್ಗುರುಗಳ ಸನ್ನಿಧಾನದಲ್ಲಿ ಸಮರ್ಪಣೆಗೊಂಡ ಬಳಿಕ, ಉದ್ಯಮಿ ಪುರುಷೋತ್ತಮ ಪಿ. ಶೆಟ್ಟಿ ಪತ್ರಿಕೆ ಬಿಡುಗಡೆಗೊಳಿಸಿದರು.

ಈ ಸಂದರ್ಭ ಮಂದಿರ-ಮಠದ ಕಾರ್ಯಾಧ್ಯಕ್ಷ, ತೋಟದ ಮನೆಯ ಕೆ. ದಿವಾಕರ್ ಶೆಟ್ಟಿ, ಅಧ್ಯಕ್ಷ ಬನ್ನಂಜೆ ಉದಯ ಕುಮಾರ್ ಶೆಟ್ಟಿ, ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಜಯಕರ್ ಶೆಟ್ಟಿ ಅಂಬಲಪಾಡಿ, ವಿಶ್ವನಾಥ ಸನಿಲ್ ಕಡೆಕಾರ್, ಕರುಣಾಕರ್ ಶೆಟ್ಟಿ ಗುಂಡಿಬೈಲು, ಸುಧಾಕರ್ ಶೆಟ್ಟಿ ಗುಂಡಿಬೈಲು, ಮಂಗಳೂರಿನ ಉಡುಪಿ ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ಎಚ್. ಶಿವಪ್ರಸಾದ್ ಹೆಗ್ಡೆ, ಉಡುಪಿಯ ಬಂಟರ ಯಾನೆ ನಾಡವರ ಮಾತೃ ಸಂಘದ ನಿಕಟಪೂರ್ವ ಸಂಚಾಲಕ ಬಿ.ಜಯರಾಜ್ ಹೆಗ್ಡೆ, ಛಾತ್ರಬೆಟ್ಟು ವ್ಯವಸ್ಥಾಪಕ ರವೀಂದ್ರ ಪುತ್ರನ್, ಸುರೇಂದ್ರ ಶೆಟ್ಟಿ ಕೊರಂಗ್ರಪಾಡಿ, ಜಯರಾಮ್ ಶೆಣೈ ಅಂಬಲಪಾಡಿ, ರತ್ನಾಕರ್ ಶೆಟ್ಟಿ ಅಂಬಲಪಾಡಿ, ಅಮಿತ್ ಶುಕ್ಲ ಅರ್ಚಕರು, ವಾಮನಾಚಾರ್ಯ ಅರ್ಚಕರು, ವರದರಾಜ ಶೆಣೈ ಅಂಬಲಪಾಡಿ, ಗಿರೀಶ್ ಸ್ವಾಮಿ ಚಿಟ್ಪಾಡಿ, ಹಾಗೂ ವಜ್ರಾಕ್ಷಿ ಪಿ ದಾಸ್ ಕಡಿಯಾಳಿ, ಯಶೋಧ ಕೆ ಶೆಟ್ಟಿ, ಶಾಲಿನಿ ಶೆಣೈ, ವನಿತಾ ವಿ ಸನಿಲ್ ಕಡೆಕಾರ್, ಸುಶೀಲಾ ಪೂಜಾರಿ ಸಂಪಿಗೆನಗರ, ಮೀರಾ ನಾಯಕ್ ಮಣಿಪಾಲ, ಸುನಂದಾ ಕೊಳದಪೇಟೆ, ಕು. ಶಾರದ ಕೊಳದಪೇಟೆ, ಹಾಗೂ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಈಶ್ವರ್ ಶೆಟ್ಟಿ ಚಿತ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next