Advertisement

ಭಾಗಲ್‌ಪುರ್‌ ಕೋಮು ಗಲಭೆ : ಕೇಂದ್ರ ಸಚಿವ ಚೌಬೇ ಪುತ್ರ ಅರೆಸ್ಟ್‌ 

04:34 PM Apr 01, 2018 | Team Udayavani |

ಭಾಗಲ್‌ಪುರ್‌: ಕೋಮುಗಲಭೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ  ಕೇಂದ್ರ ಸಚಿವ ಅಶ್ವಿ‌ನ್‌ ಕುಮಾರ್‌ ಚೌಬೇ ಅವರ  ಪುತ್ರ ಆರ್ಜಿತ್‌ ಶಾಶ್ವತ್‌ನನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.

Advertisement

ಮೇ 17 ರಂದು ಯುಗಾದಿ ವೇಳೆ ಹಿಂದೂ ಪರ ಸಂಘಟನೆಯ ಮೆರವಣಿಗೆ ತೆರಳುತ್ತಿದ್ದ ವೇಳೆ ಮಸೀದಿಯೊಂದರ ಎದುರು ಘೋಷಣೆಗಳನ್ನು ಕೂಗಿ ಕೋಮು ಘರ್ಷಣೆ ಭುಗಿಲೇಳಲು ಕಾರಣವಾದ ಆರೋಪ ಆರ್ಜಿತ್‌ ಮೇಲಿದೆ.

ಭಾಗಲ್‌ಪುರ್‌ನಲ್ಲಿ ಕಾಣಿಸಿಕೊಂಡಿದ್ದ ಕೋಮು ಘರ್ಷಣೆಯ ಕಿಡಿ ಬಿಹಾರದ 10 ಜಿಲ್ಲೆಗಳಿಗೆ ವ್ಯಾಪಿಸಿತ್ತು.

ಪಾಟ್ನಾದ ಹನುಮಾನ್‌ ದೇವಾಲಯಲ್ಲಿ ಆರ್ಜಿತ್‌ನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್ಜಿತ್‌ ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next