Advertisement

Bhadravathi: ಕತ್ತು ಹಿಸುಕಿ ಮಹಿಳೆ ಹತ್ಯೆ: ಆರೋಪಿಯ ಬಂಧನ

06:30 PM Sep 19, 2023 | Shreeram Nayak |

ಭದ್ರಾವತಿ: ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಮಹಿಳೆಯೋರ್ವಳ ಕೊಲೆಯಾಗಿದೆ.

Advertisement

ಸಂಕ್ಲೀಪುರದಲ್ಲಿರುವ ಎಂಪಿಎಂ ನೀಲಗಿರಿ ಪ್ಲಾಂಟೇಶನ್‌ನಲ್ಲಿ ಮರ ಕತ್ತರಿಸುವ ಕೆಲಸಕ್ಕೆಂದು ಚಿತ್ರದುರ್ಗ ಜಿಲ್ಲೆಯ ಭರಮಸಗರದ ನಿವಾಸಿ ರೂಪ (30) ಎಂಬಾಕೆಯೇ ಕೊಲೆಯಾದ ಮಹಿಳೆ.

ಈಕೆ ಕಳೆದ ಎರಡು ವರ್ಷಗಳಿಂದ ಇಲ್ಲಿ ಕೆಲಸ ನಿರ್ವಹಿಸುತ್ತಾ ಸಿಂಗಾರಿ ಎಂಬ ವ್ಯಕ್ತಿಯೊಂದಿಗೆ ವಾಸವಾಗಿದ್ದಳು ಎನ್ನಲಾಗಿದೆ. ಇವರಿಬ್ಬರು ಮೇಸ್ತ್ರಿಯೋರ್ವರ ಬಳಿ ಮರ ಕತ್ತರಿಸುವ ಕೆಲಸಕ್ಕೆ ಸೇರಿಕೊಂಡು ಕೆಲಸ ನಿರ್ವಹಿಸುತ್ತಿದ್ದರು. ಶನಿವಾರ ಸಂಜೆ ಇಬ್ಬರೂ ಮೇಸ್ತ್ರಿಯಿಂದ ಕೂಲಿ ಪಡೆದುಕೊಂಡು ಹೋಗಿದ್ದರು. ಇಬ್ಬರೂ ಮದ್ಯಪಾನ ಮಾಡಿದ ಮತ್ತಿನಲ್ಲಿ ಪರಸ್ಪರ ಜಗಳವಾಡಿಕೊಳ್ಳುವಾಗ ಸಿಂಗಾರಿ ರೂಪಾಳ ಕತ್ತು ಹಿಸುಕಿ, ಆಕೆಯ ಹೊಟ್ಟೆಗೆ ಕಾಲಿನಿಂದ ಬಲವಾಗಿ ಒದ್ದಿದ್ದರಿಂದ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಈ ಕುರಿತಂತೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಆರೋಪಿ ಸಿಂಗಾರಿಯನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next