Advertisement

ಕ್ವಾರೆಂಟೈನ್‌ಗೆ ಹಾಸ್ಟೆಲ್‌ ಬಳಸಿಕೊಳ್ಳಬೇಡಿ

05:37 PM May 13, 2020 | Naveen |

ಭದ್ರಾವತಿ: ಕೋವಿಡ್‌-19ಗೆ ಸಂಬಂಧಪಟ್ಟಂತೆ ಹೊರಜಿಲ್ಲೆ ಮತ್ತು ಹೊರರಾಜ್ಯಗಳಿಂದ ಶಿವಮೊಗ್ಗ ಜಿಲ್ಲೆಗೆ ಬಂದಿರುವವರನ್ನು ಜಿಲ್ಲಾಡಳಿತ ಭದ್ರಾವತಿ ತಾಲೂಕಿನ ಹಲವು ವಿದ್ಯಾರ್ಥಿನಿಲಯಗಳಲ್ಲಿ ಕ್ವಾರಂಟೈನ್‌ ನಲ್ಲಿಡಲು ನಿರ್ಧರಿಸಿರುವುದನ್ನು ಶಾಸಕ ಬಿ.ಕೆ. ಸಂಗಮೇಶ್‌ ಅವರು ಬಲವಾಗಿ ವಿರೋಧಿಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

Advertisement

ತಾಲೂಕಿನ ದೇವರ ನರಸೀಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರೆಂಟೈನ್‌ ಮಾಡುವುದರ ವಿರುದ್ಧ ಸೋಮವಾರ ರಾತ್ರಿ ಗ್ರಾಮಸ್ಥರು ನಡೆಸಿದ ಪ್ರತಿಭಟನಾ ಸ್ಥಳಕ್ಕೆ ಶಾಸಕ ಬಿ.ಕೆ. ಸಂಗಮೇಶ್ವರ್‌ ಭೇಟಿ ನೀಡಿ ತಾಲೂಕಿನ ಯಾವುದೇ ವಿದ್ಯಾರ್ಥಿ ನಿಲಯಗಳಲ್ಲಿ ಕ್ವಾರಂಟೈನ್‌ ಮಾಡಲು ಅವಕಾಶ ನೀಡುವುದಿಲ್ಲ ಎಂಬ ಭರವಸೆ ನೀಡಿದ್ದರು.

ಭದ್ರಾವತಿ ತಾಲೂಕಿನ ಹಲವು ವಿದ್ಯಾರ್ಥಿನಿಲಯಗಳನ್ನು ಕ್ವಾರಂಟೈನ್‌ ಗೆ ಬಳಸಿಕೊಳ್ಳಲು ಸ್ವತ್ಛಗೊಳಿಸಲಾಗುತ್ತಿದೆ ಎಂಬ ಸುದ್ಧಿ ತಿಳಿದ ಜನರು ಆಯಾ ವಿಭಾಗದ ಹಾಸ್ಟೆಲ್‌ಗ‌ಳ ಮೂಂದೆ ಪ್ರತಿಭಟನೆ ನಡೆಸಿ, ಬೇರೆಡೆ ಕೋವಿಡ್ ಸೋಂಕಿನಿಂದ ಜನರಿಗೆ ಆಗಿರುವ ಆಘಾತವೇ ಸಾಕಾಗಿದೆ. ಇಲ್ಲಿ ಕ್ವಾರೆಂಟೈನ್‌ ನಿಂದ ಮತ್ತಷ್ಟು ಅನಾಹುತವಾಗುವುದು ಬೇಡವೆಂದು ಸುತ್ತಮುತ್ತಲ ಪ್ರದೇಶದ ಮಹಿಳೆಯರು ಪ್ರತಿಭಟನೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next