Advertisement

Bhadravathi; ಶಿಥಿಲ ನೀರಿನ ಟ್ಯಾಂಕ್ ತೆರವುಗೊಳಿಸಲು ಆಗ್ರಹ

06:18 PM Apr 04, 2024 | Vishnudas Patil |

ಶಿವಮೊಗ್ಗ: ಬಿರುಗಾಳಿ ಸಹಿತ ಸುರಿದ ಮಳೆಗೆ ಬುಧವಾರ ಭದ್ರಾವತಿ ತಾಲ್ಲೂಕಿನ ಹೊಸಸಿದ್ದಾಪುರ ಬಡಾವಣೆಯ ಓವರ್ ಹೆಡ್‌ಟ್ಯಾಂಕ್ ಕಬ್ಬಿಣದ ಏಣಿ ಕುಸಿದು ಬಿದ್ದಿತ್ತು. ಬಾಕಿ ಏಣಿಗಳು ಸಹ ಶಿಥಿಲಗೊಂಡಿದ್ದರಿಂದ ಗುರುವಾರ ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು.

Advertisement

ಹೊಸಸಿದ್ದಾಪುರದ ಈ ಓವರ್ ಹೆಡ್ ಟ್ಯಾಂಕ್ 25 ವರ್ಷ ಮೇಲ್ಪಟ್ಟಿದ್ದು ಸಂಪೂರ್ಣ ಶಿಥಿಲಗೊಂಡಿದೆ. ಇದನ್ನು ಕೆಡವಿ ಹೊಸ ಟ್ಯಾಂಕ್ ಕಟ್ಟಬೇಕೆಂದು ನಗರಸಭೆ ಸದಸ್ಯರು, ಗ್ರಾಮಸ್ಥರು ಆಗ್ರಹಿಸಿದ್ದರು. ನಗರಸಭೆ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಅನುಮೋದನೆ ಕೊಟ್ಟಿರಲಿಲ್ಲ.

ಬುಧವಾರ ಬೀಸಿದ ಬಿರುಗಾಳಿಗೆ ಕಬ್ಬಿಣದ ಏಣಿ ಬಿದ್ದಿದೆ. ಅಲ್ಲದೇ ಟ್ಯಾಂಕ್‌ನ ಕಾಂಕ್ರೀಟ್ ಚಕ್ಕೆ ರೂಪದಲ್ಲಿ ಉದುರುತ್ತಿದೆ. ಶಾಲೆ ಆವರಣದಲ್ಲಿರುವ ಈಟ್ಯಾಂಕ್‌ನಿಂದ ಮಕ್ಕಳಿಗೆ ಅಪಾಯ ತಪ್ಪಿದ್ದಲ್ಲ. ನಗರಸಭೆ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಅನುಮೋದನೆ ಕೊಡುವ ಜತೆಗೆ ಶಿಥಿಲ ಟ್ಯಾಂಕ್ ತೆರವುಗೊಳಿಸಲು ಮುಂದಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next