Advertisement

ಬಾಂಗ್ಲಾ ವಲಸಿಗರಿಂದ ಎಚ್ಚರವಿರಲಿ: ಸಿ.ಟಿ. ರವಿ

10:39 PM Jul 27, 2022 | Team Udayavani |

ಬೆಂಗಳೂರು: ಚಿಕ್ಕಮಗಳೂರಿನಲ್ಲಿ ನಾಲ್ಕು ಜನ ಬಾಂಗ್ಲಾ ದೇಶದಿಂದ ಬಂದವರ ಬಂಧನ ಮಾಡಿದ್ದಾರೆ.

Advertisement

ಬಾಂಗ್ಲಾ ದೇಶದಿಂದ ಅಕ್ರಮ ನುಸುಳುಕೋರರ ಸಂಖ್ಯೆ ಹೆಚ್ಚಾಗುತ್ತಿದೆ. ಇವರ ಮೇಲೆ ನಿಗಾ ಇಡದಿದ್ದರೆ, ಇದು ದೇಶದ ಭದ್ರತೆ ಮಾರಕವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿ, ಬಂಗ್ಲಾದಿಂದ ವಲಸೆ ಬಂದಿರುವವರು ಚಿಕ್ಕಮಗಳೂರಿನ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಲ್ಯಾಂಡ್‌ ಫಿಲ್ಲಿಂಗ್‌ ಕೆಲಸದಲ್ಲೂ ಇವರು ಇದ್ದಾರೆ. ವ್ಯವಸ್ಥಿತವಾಗಿ ಅವರನ್ನು ಇಲ್ಲಿಯೇ ನೆಲೆಯೂರುವಂತೆ ಮಾಡಿಸುವ, ಕೆಲಸ ಕೊಡಿಸುವ ಜಾಲ ಇಲ್ಲಿ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next