Advertisement

ಎರಡು ಬೈಕ್ ಗಳ ನಡುವೆ ಢಿಕ್ಕಿ: ಸ್ಟಡ್ ಫಾರಂ ನೌಕರ ಸಾವು

09:22 PM Aug 21, 2022 | Team Udayavani |

ಕುಣಿಗಲ್ : ಎರಡು ಬೈಕ್ ಗಳ‌ ನಡುವೆ ಢಿಕ್ಕಿ ಸಂಬವಿಸಿ ಸ್ಟಡ್ ಫಾರಂ ನೌಕರ ಮೃತಪಟ್ಟಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಚೌದರಿಪಾಳ್ಯ ಗ್ರಾಮದ ಬಳಿ ಭಾನುವಾರ ನಡೆದಿದೆ.

Advertisement

ಬೋರಲಿಂಗಪಾಳ್ಯ ಗ್ರಾಮದ ನಿವಾಸಿ ವೆಂಕಟೇಶ್ ಅಲಿಯಾಸ್ ಜಗದೀಶ್ (49) ಮೃತ ದುರ್ದೈವಿ.

ಬಿಳಿದೇವಾಲಯ ಗ್ರಾಮದ ಟೀ ಅಂಗಡಿ ನಾಗಣ್ಣ ಅವರ ಮಗಳ ಮದುವೆಯ ಬೀಗರ ಔತಣಕೂಟಕ್ಕೆಂದು ರಂಗನಾಥಸ್ವಾಮಿ ಬೆಟ್ಟಕ್ಕೆ ಬೈಕ್ ನಲ್ಲಿ ಹೋಗುತ್ತಿರುವಾಗ,ಮತ್ತೊಂದು ಬೈಕ್ ಢಿಕ್ಕಿ ಹೊಡೆದ ಪರಿಣಾಮ ವೆಂಕಟೇಶ್ ಬೈಕ್ ನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next