Advertisement

ಎಲ್ಲ ರಾಜ್ಯಗಳಲ್ಲಿನ ಮಾಲಿನ್ಯದ ವರದಿ ನೀಡಿ ಎಂದ ಸುಪ್ರೀಂ ಕೋರ್ಟ್

09:50 AM Nov 28, 2019 | Team Udayavani |

ಹೊಸದಿಲ್ಲಿ: ಎಲ್ಲ ರಾಜ್ಯಗಳಲ್ಲಿನ ವಾಯು ಹಾಗೂ ಕುಡಿಯುವ ನೀರಿನ ಗುಣಮಟ್ಟ, ಆ ರಾಜ್ಯಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಅಳವಡಿಸಿಕೊಳ್ಳಲಾಗಿರುವ ಕ್ರಮಗಳ ಬಗ್ಗೆ ಸಮಗ್ರ ವರದಿ ನೀಡಬೇಕೆಂದು ಸುಪ್ರೀಂಕೋರ್ಟ್‌ ಸೋಮವಾರ ಕೇಂದ್ರ, ಎಲ್ಲ ರಾಜ್ಯ ಸರಕಾರಗಳಿಗೆ ಸೂಚಿಸಿದೆ.

Advertisement

ದಿಲ್ಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ ಹಿನ್ನೆಲೆಯಲ್ಲಿ ದೇಶದ ಇನ್ನಿತರ ರಾಜ್ಯಗಳಲ್ಲಿ ಇರಬಹುದಾದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ದೀಪಕ್‌ ಗುಪ್ತಾ ಅವರುಳ್ಳ ಪೀಠ, ಎಲ್ಲ ರಾಜ್ಯಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿತು. ಜತೆಗೆ, ದಿಲ್ಲಿ-ಎನ್‌ಸಿಆರ್‌ ವ್ಯಾಪ್ತಿಯಲ್ಲಿ ವಾಯು ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸ್ಮಾಗ್‌ ಟವರ್‌ ಸ್ಥಾಪಿಸುವ ಬಗ್ಗೆ 10 ದಿನಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಕೇಂದ್ರಕ್ಕೆ ತಿಳಿಹೇಳಿತು.

‘ಒಂದೇ ಬಾರಿಗೆ ಕೊಂದುಬಿಡಿ’
ತನ್ನ ಕಟ್ಟುನಿಟ್ಟಿನ ಸೂಚನೆಯ ಹೊರತಾಗಿಯೂ ಪಂಜಾಬ್‌, ಹರಿಯಾಣಗಳಲ್ಲಿ ಕಳೆಗಳಿಗೆ ಬೆಂಕಿ ಇಡುವ ರೈತರ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಡೆಗಟ್ಟುವಲ್ಲಿ ಅಲ್ಲಿನ ಸರಕಾರಗಳು ವಿಫ‌ಲವಾಗಿರುವುದಕ್ಕೆ ನ್ಯಾಯ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಮಾಲಿನ್ಯಕ್ಕೆ ಮೂಲ ಕಾರಣವಾದ ಕಳೆಗಳ ದಹನವನ್ನು ತಡೆಯಲು ನಿಮ್ಮಿಂದ (ಸರಕಾರಗಳು) ಸಾಧ್ಯವಾಗುತ್ತಿಲ್ಲ. ಈ ಮೂಲಕ ಜನರನ್ನು ಬಲ ವಂತವಾಗಿ ಗ್ಯಾಸ್‌ ಚೇಬರ್‌ ನಲ್ಲಿ ಜೀವಿಸುವಂತೆ ಮಾಡಿದ್ದೀರಿ. ಜನರನ್ನು ಹಾಗೆ ನಿಧಾನವಾಗಿ ಕೊಲ್ಲುವುದಕ್ಕಿಂತ, ಒಂದಿಷ್ಟು ಸ್ಫೋಟಕಗಳನ್ನು ತಂದು ಸ್ಫೋಟಿಸಿ ಜನರನ್ನು ಒಂದೇ ಬಾರಿಗೆ ಕೊಂದುಬಿಡಿ’ ಎಂದು ಸರಕಾರಗಳ ವಿರುದ್ಧ ನ್ಯಾಯ ಮೂರ್ತಿಗಳು ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next