Advertisement

Best Bakery ಕೇಸು: ಇಬ್ಬರ ಖುಲಾಸೆ

11:19 PM Jun 13, 2023 | Team Udayavani |

ಮುಂಬಯಿ: ಗುಜರಾತ್‌ನಲ್ಲಿ 2002ರಲ್ಲಿ ಉಂಟಾಗಿದ್ದ ಗಲಭೆಯ ವೇಳೆ ಸಂಭವಿಸಿದ್ದ ಬೆಸ್ಟ್‌ ಬೇಕರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಶದ್‌ ಸೋಲಂಕಿ ಮತ್ತು ಮಫ‌ತ್‌ ಗೋಹಿಲ್‌ ಎಂಬವರನ್ನು ಆರೋಪ ಮುಕ್ತಗೊಳಿಸಲಾಗಿದೆ. ಮುಂಬಯಿಯ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶಎಂ.ಜಿ.ದೇಶಪಾಂಡೆ ಈ ಆದೇಶ ನೀಡಿದ್ದಾರೆ.

Advertisement

2003ರಲ್ಲಿ ನಡೆದಿದ್ದ ವಿಚಾರಣೆ ವೇಳೆ ವಡೋದರಾದ ನ್ಯಾಯಾಲಯ ಎಲ್ಲ 21 ಮಂದಿಯನ್ನು ಖುಲಾಸೆಗೊಳಿಸಿತ್ತು. 2002 ಮಾ.1ರಂದು ವಡೋದರಾದಲ್ಲಿ ನಡೆದಿದ್ದ ಘಟನೆಯಲ್ಲಿ ಬೆಸ್ಟ್‌ ಬೇಕರಿ ಮೇಲೆ ನಡೆಸಲಾಗಿದ್ದ ದಾಳಿಯಲ್ಲಿ 14 ಮಂದಿ ಅಸುನೀಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next