Advertisement

ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಕಿರಿಯ ಎಂಜಿನಿಯರ್

10:00 AM Oct 04, 2019 | Team Udayavani |

ಚಿಕ್ಕಬಳ್ಳಾಪುರ: ರೈತರೊಬ್ಬರು ತಮ್ಮ ಜಮೀನಲ್ಲಿ ಸುಟ್ಟು ಹೋಗಿದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬದಲಿಸಿ ಕೊಡಲು ರೈತರಿಂದ ಲಂಚ ಸ್ಪೀಕರಿಸುವ ವೇಳೆ ಚಿಕ್ಕಬಳ್ಳಾಪುರ ಗ್ರಾಮೀಣ ವಿಭಾಗದ ಬೆಸ್ಕಾಂ ಕಿರಿಯ ಎಂಜಿನಿಯರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

Advertisement

ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡಕಿರುಂಗುಬಿ ರೈತ ಮಲ್ಲೇಶ್ ಕುಮಾರ್ ತಮ್ಮ ತೋಟದಲ್ಲಿ 20 ದಿನಗಳ ಹಿಂದೆ ಸುಟ್ಟಿದ್ದ ಟಿಸಿ ಬದಲಾಯಿಸುವಂತೆ ಕೋರಿದ್ದರು. ಆಗ ಬೆಸ್ಕಾಂ ಕಿರಿಯ ಎಂಜಿನಿಯರ್ ಕೆ.ಸಿ.ಮಂಜುನಾಥ ನಾಯ್ಡು 3000 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಗುರುವಾರ ತಮ್ಮ ಕಚೇರಿಯಲ್ಲಿ 2000 ಸಾವಿರ ರೂ. ಲಂಚ ಸ್ಪೀಕರಿಸುವ ವೇಳೆ ಎಸಿಬಿ ಡಿವೈಎಸ್ಪಿ ವೆಂಕಟೇಶ ನಾಯ್ಡು ಹಾಗೂ ಸಿಬ್ಬಂದಿ ದಾಳಿ ನಡೆಸಿ ಹಣದ ಸಮೇತ ಬಲೆಗೆ ಕೆಡವಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next