Advertisement

ಬೆಸೆಂಟ್‌ ಜಂಕ್ಷನ್‌- ಕಲಾಕುಂಜ ಕಾಂಕ್ರೀಟ್‌ ಕಾಮಗಾರಿ ಆರಂಭ: ದಿನ ವಾಹನ ಸಂಚಾರ ನಿರ್ಬಂಧ

08:54 PM Nov 12, 2021 | Team Udayavani |

ಎಂ.ಜಿ. ರಸ್ತೆ: ಇಲ್ಲಿಯ ಬೆಸೆಂಟ್‌ ಜಂಕ್ಷನ್‌ನಿಂದ ಕಲಾಕುಂಜಕ್ಕೆ ಸಂಪರ್ಕಿಸುವ ರಸ್ತೆಗೆ ಕಾಂಕ್ರೀಟ್‌ ಹಾಕುವ ಕಾಮಗಾರಿ ಆರಂಭಿಸಲಾಗಿದೆ.

Advertisement

ಹಲವು ದಿನಗಳ ಹಿಂದೆಯೇ ಒಳಚರಂಡಿ ಕಾಮಗಾರಿ ನಡೆಸಲಾಗಿತ್ತು. ಹೀಗಾಗಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಮಾರ್ಪಾಡಿಸಲಾಗಿತ್ತು. ಆ ಬಳಿಕ ಲಘುವಾಹನಗಳು ಸಂಚರಿಸುತ್ತಿದ್ದವು. ಈಗ ಕಾಮಗಾರಿ ಕಾರಣ ದಿಂದ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಒಂದು ಭಾಗದ ಕಾಮಗಾರಿ ಮುಗಿ ದಿದ್ದು, ಮತ್ತೂಂದು ಭಾಗದ ಕೆಲಸ ನಡೆಯುತ್ತಿದೆ. ಒಂದು ವಾರದೊಳಗೆ ಕಾಂಕ್ರೀಟ್‌ ಹಾಕಲಿದ್ದು, ಬಳಿಕ ಕ್ಯೂರಿಂಗ್‌ಗೆ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಕ್ಯೂರಿಂಗ್‌ ಕಾರ್ಯ ಬೇಗ ಮುಗಿದರೆ  ನಿಗದಿತ ಅವಧಿಗಿಂತ (21) ಮೊದಲೇ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬಹುದು.

ಜೈಲ್‌ ರಸ್ತೆ ಕಾಮಗಾರಿ:

ಇಲ್ಲಿನ ಕಾಮಗಾರಿ ಮುಗಿದ ಬಳಿಕ ಬೆಸೆಂಟ್‌ ಜಂಕ್ಷನ್‌ನಿಂದ ಜೈಲ್‌ ರೋಡ್‌ ಸಂಪರ್ಕಿಸುವ ರಸ್ತೆಗೆ ಕಾಂಕ್ರೀಟ್‌ ಹಾಕಲಾಗುವುದು. ಸದ್ಯ ಇಲ್ಲಿ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ.

Advertisement

ನವಭಾರತ್‌ ಸರ್ಕಲ್‌ನಿಂದ ಶಾರದಾ ಕಾಲೇಜು ಮುಂಭಾಗದ ರಸ್ತೆ ಕಾಂಕ್ರೀಟ್‌ ಕಾಮಗಾರಿ ಇತ್ತೀಚೆಗೆ ಮುಕ್ತಾಯವಾಗಿದ್ದು, ಫುಟ್‌ಪಾತ್‌ ಕಾಮಗಾರಿ ಕೊನೆ ಹಂತದಲ್ಲಿದೆ. ವಿದ್ಯುತ್‌ ಕಂಬಗಳ ಬದಲಾವಣೆ ಪ್ರಕ್ರಿಯೆ ಕೆಲವು ದಿನದಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next