Advertisement

New Delhi; ಕಚೋರಿ ಅಂಗಡಿಗೆ ನುಗ್ಗಿದ ಬೆಂಜ್‌ ಕಾರು: 6 ಮಂದಿಗೆ ಗಾಯ

10:00 PM Apr 02, 2024 | Team Udayavani |

ನವದೆಹಲಿ: ಮರ್ಸಿಡಿಸ್‌ ಬೆಂಜ್ ಕಾರು ನಿಯಂತ್ರಣ ಕಳೆದುಕೊಂಡು ನವದೆಹಲಿಯ ಸಿವಿಲ್‌ ಲೈನ್ಸ್‌ ಪ್ರದೇಶದಲ್ಲಿರುವ ಕಚೋರಿ ಅಂಗಡಿಗೆ ನುಗ್ಗಿದೆ. ಇದರಿಂದಾಗಿ ಅಂಗಡಿ ಕೆಲಸಗಾರರು ಸೇರಿದಂತೆ 6 ಮಂದಿ ಗಾಯಗೊಂಡಿದ್ದಾರೆ.

Advertisement

ಸಿವಿಲ್‌ ಲೈನ್ಸ್‌ ಪ್ರದೇಶದ ರಾಜ್‌ಪುರ್‌ ರಸ್ತೆ ಫ‌ತೇಹ್‌ಚಂದ್‌ ಕಚೋರಿ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಾರು ಚಾಲನೆ ಮಾಡುತ್ತಿದ್ದ ಉದ್ಯಮಿ ಪರಾಗ್‌ ಮೈನಿ ಮತ್ತು ಅವರ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಚೋರಿ ತಿನ್ನಲು ತಮ್ಮ ಪತ್ನಿಯೊಂದಿಗೆ ಮೈನಿ ಆಗಮಿಸಿದ್ದರು. ಪಾರ್ಕಿಂಗ್‌ ಮಾಡುವಾಗ ಬ್ರೇಕ್‌ ಒತ್ತುವ ಬದಲು ಆಕ್ಸಿಲೇಟರ್‌ ಒತ್ತಿದ್ದು, ಅಪಘಾತಕ್ಕೆ ಕಾರಣವಾಗಿದೆ.

ಗಾಯಗೊಂಡ 6 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next