Advertisement

Bengaluru Water Crisis; ಇತರ ಕಾರಣಕ್ಕೆ ಕುಡಿಯುವ ನೀರು ಬಳಸಿದ 22 ಕುಟುಂಬಗಳಿಗೆ ದಂಡ

04:36 PM Mar 25, 2024 | Team Udayavani |

ಬೆಂಗಳೂರು: ಕುಡಿಯುವ ನೀರನ್ನು ಇತರೆ ಬಳಕೆಗೆ ಉಪಯೋಗಿಸಿದ ಕಾರಣಕ್ಕೆ ರಾಜಧಾನಿ ಬೆಂಗಳೂರಿನ 22 ಕುಟುಂಬಗಳಿಗೆ ದಂಡ ವಿಧಿಸಲಾಗಿದೆ. ಕಾರು-ಬೈಕ್ ತೊಳೆಯಲು, ಗಾರ್ಡನ್ ಗಳಿಗೆ ಕುಡಿಯುವ ನೀರನ್ನು ಬಳಸಿದ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

ರಾಜ್ಯದಲ್ಲಿ ತೀವ್ರ ಅಭಾವವಿರುವ ನೀರಿನ ಸಂರಕ್ಷಣೆಗಾಗಿ ನೀರು ಸರಬರಾಜು ಮಂಡಳಿಯ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರತಿ ಕುಟುಂಬವು 5,000 ರೂ ದಂಡವನ್ನು ಪಾವತಿಸಬೇಕಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) 22 ಮನೆಗಳಿಂದ ₹ 1.1 ಲಕ್ಷ ದಂಡವನ್ನು ಸಂಗ್ರಹಿಸಿದೆ ಎಂದು ತಿಳಿಸಿದೆ. ನಗರದ ವಿವಿಧ ಪ್ರದೇಶಗಳಿಂದ ದಂಡವನ್ನು ಸಂಗ್ರಹಿಸಲಾಗಿದ್ದು, ದಕ್ಷಿಣ ಪ್ರದೇಶದಿಂದ ಅತಿ ಹೆಚ್ಚು (80,000 ರೂ.) ದಂಡವನ್ನು ಸಂಗ್ರಹಿಸಲಾಗಿದೆ ಎಂದಿದೆ.

ಈ ತಿಂಗಳ ಆರಂಭದಲ್ಲಿ, ಬಿಡಬ್ಲ್ಯುಎಸ್ಎಸ್ ಬಿ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಕುಡಿಯುವ ನೀರಿನ ಮಿತವ್ಯಯ ಬಳಕೆಗೆ ಶಿಫಾರಸು ಮಾಡಿತ್ತು. ವಾಹನಗಳನ್ನು ತೊಳೆಯಲು, ನಿರ್ಮಾಣ ಮತ್ತು ಮನರಂಜನಾ ಉದ್ದೇಶಗಳಿಗಾಗಿ ಕುಡಿಯುವ ನೀರನ್ನು ಬಳಸುವುದನ್ನು ತಪ್ಪಿಸುವಂತೆ ನಗರದ ನಿವಾಸಿಗಳಿಗೆ ಒತ್ತಾಯಿಸಲಾಗಿದೆ.

ಪುನರಾವರ್ತಿತ ಅಪರಾಧಿಗಳಿಗೆ, ಆದೇಶವನ್ನು ಉಲ್ಲಂಘಿಸಿದಾಗ ಪ್ರತಿ ಬಾರಿಯೂ  500 ರೂ ಹೆಚ್ಚುವರಿ ದಂಡವನ್ನು ವಿಧಿಸಲು ಮಂಡಳಿಯು ನಿರ್ಧರಿಸಿದೆ.

Advertisement

ಹೋಳಿ ಆಚರಣೆಯ ಸಂದರ್ಭದಲ್ಲಿ, ಪೂಲ್ ಪಾರ್ಟಿಗಳು ಮತ್ತು ರೈನ್ ಡ್ಯಾನ್ಸ್ ಗಳಿಗೆ ಕಾವೇರಿ ಮತ್ತು ಬೋರ್‌ವೆಲ್ ನೀರನ್ನು ಬಳಸದಂತೆ ನಿವಾಸಿಗಳಿಗೆ ಸಲಹೆ ನೀಡಿದೆ. ನೀರಿನ ಬಳಕೆಯನ್ನು ಕಡಿಮೆ ಮಾಡಲು ಏರೇಟರ್‌ ಗಳನ್ನು ಸ್ಥಾಪಿಸಲು ಹೋಟೆಲ್‌ ಗಳು, ಅಪಾರ್ಟ್‌ಮೆಂಟ್‌ ಗಳು ಮತ್ತು ಕೈಗಾರಿಕೆಗಳನ್ನು ಉತ್ತೇಜಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next