Advertisement

Bengaluru: ಕದ್ದ ಒಡವೆಯನ್ನು ಪ್ರೇಯಸಿಗೆ ಕೊಟ್ಟಿದ್ದ ವ್ಯಕ್ತಿ ಸೇರಿ ಇಬ್ಬರ ಸೆರೆ

01:26 PM Aug 17, 2024 | Team Udayavani |

ಬೆಂಗಳೂರು: ಮನೆಗಳ್ಳತನ ಮಾಡಿದ ಚಿನ್ನನ್ನು ಪ್ರೇಯಸಿಗೆ ಹಾಗೂ ಸ್ನೇಹಿತನಿಗೆ ನೀಡಿದ್ದ ಆರೋಪಿ ಸೇರಿದಂತೆ ಇಬ್ಬರನ್ನು ಬಂಧಿಸಿರುವ ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು, 31 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

Advertisement

ಕಾರ್ತಿಕ್‌ (36) ಹಾಗೂ ಆತನ ಸ್ನೇಹಿತ ರಘು (26) ಬಂಧಿತರು.

ಬಂಧಿತರಿಂದ 31 ಲಕ್ಷ ರೂ. ಮೌಲ್ಯದ 470 ಗ್ರಾಂ ಚಿನ್ನಾಭರಣ ಮತ್ತು 3 ಕೆ.ಜಿ.ಬೆಳ್ಳಿಯ ಗಟ್ಟಿ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಜು.8ರಂದು ಕೆ.ಎಸ್‌.ಲೇಔಟ್‌ನ ಮನೆಯೊಂದರ ಬೀಗ ಮುರಿದು ಕಳ್ಳತನ ಮಾಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಕಾರ್ತಿಕ್‌ ಸಿಕ್ಕಿ ಬಿದ್ದಿದ್ದ. ಆತ ಕೊಟ್ಟ ಮಾಹಿತಿ ಆಧರಿಸಿ ಆತನೊಂದಿಗೆ ಕಳ್ಳತನಕ್ಕೆ ಕೈ ಜೋಡಿಸುತ್ತಿದ್ದ ಆರೋಪಿ ರಘುವನ್ನು ಬಂಧಿಸಿದ್ದಾರೆ.

ಕಳವು ಮಾಡಿದ ಕೆಲವು ಚಿನ್ನಾಭರಣಗಳನ್ನು ಬೆಂಗಳೂರು ನಗರ ಮತ್ತು ಹೈದರಾಬಾದ್‌ನ ವಿವಿಧ ಜ್ಯೂವೆಲ್ಲರಿ ಅಂಗಡಿಗಳಲ್ಲಿ ಅಡಮಾನ ಇಟ್ಟಿದ್ದೆ. ಇನ್ನೂ ಕೆಲವನ್ನು ಪ್ರೇಯಸಿ ಹಾಗೂ ಸ್ನೇಹಿತ ರಘುಗೆ ನೀಡಿರುವುದಾಗಿ ವಿಚಾರಣೆಯಲ್ಲಿ ಕಾರ್ತಿಕ್‌ ಬಾಯ್ಬಿಟ್ಟಿದ್ದ. ಈ ಮಾಹಿತಿ ಆಧರಿಸಿ ಆರೋಪಿ ರಘು, ಆತನ ಪ್ರೇಯಸಿಯ ಬಳಿಯಿದ್ದ ಚಿನ್ನ, ಅಡವಿಟ್ಟಿದ್ದ ಆಭರಣ ಸೇರಿ ಒಟ್ಟು 470 ಗ್ರಾಂ ಚಿನ್ನಾಭರಣ, 3 ಕೆ.ಜಿ.ಬೆಳ್ಳಿಯನ್ನು ವಶ ಪಡಿಸಿಕೊಳ್ಳಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next