Advertisement

Bengaluru; ತಮಿಳು ನಟ ಸಿದ್ದಾರ್ಥ್ ಪತ್ರಿಕಾಗೋಷ್ಠಿ ತಡೆದು ಕರವೇ ಆಕ್ರೋಶ: Video

09:57 PM Sep 28, 2023 | Team Udayavani |

ಬೆಂಗಳೂರು: ತಮಿಳು ಖ್ಯಾತ ನಟ ಸಿದ್ದಾರ್ಥ್ ಅವರು ‘ಚಿಕ್ಕು’ ಚಿತ್ರದ ಪ್ರಚಾರಾರ್ಥ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಕಾವೇರಿ ಪರ ಹೋರಾಟಗಾರರ ಆಕ್ರೋಶಕ್ಕೆ ಗುರಿಯಾದ ಘಟನೆ ಗುರುವಾರ ನಡೆದಿದೆ.

Advertisement

ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಸುದ್ದಿಗೋಷ್ಠಿ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿ ತೀವ್ರ ಆಕ್ರೋಶ ಹೊರ ಹಾಕಿದರು. ಖ್ಯಾತ ನಟನನ್ನು ತರಾಟೆಗೆ ತೆಗೆದುಕೊಂಡರು. ನಮಗೆ ಕುಡಿಯಲು ಇರುವ ನೀರು ತಮಿಳುನಾಡಿಗೆ ಹೋಗುತ್ತಿದೆ. ಈ ಸಂದರ್ಭದಲ್ಲಿ ಸಿನಿಮಾ ಪರ ಪ್ರಚಾರ ಬೇಕಿತ್ತಾ? ಬನ್ನಿ ನಮ್ಮ ಜತೆ ಹೋರಾಟಕ್ಕೆ ಕೈಜೋಡಿಸಿ ಎಂದು ಸವಾಲೆಸೆದರು.

ಮಲ್ಲೇಶ್ವರದ ಎಸ್​ಆರ್​ವಿ ಚಿತ್ರಮಂದಿರದಲ್ಲಿ ‘ಚಿಕ್ಕು’ ಚಿತ್ರದ ಕನ್ನಡ ಆವೃತ್ತಿಯ ಕುರಿತು ಪ್ರಚಾರಕ್ಕೆ ಆಗಮಿಸಿದ ನಟ ಸಿದ್ದಾರ್ಥ್ ಅರ್ಧದಲ್ಲೇ ಮೊಟಕುಗೊಳಿಸಿ ಕಾರನ್ನೇರಿ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next