Advertisement

Bengaluru: 5ನೇ ಮಹಡಿ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

08:27 AM Aug 09, 2024 | Team Udayavani |

ಬೆಂಗಳೂರು: ಯುವಕನೊಬ್ಬ ಶೇಷಾದ್ರಿಪುರ ಕಾಲೇಜು ಹಿಂಭಾಗದ ನಿರ್ಮಾಣದ ಹಂತದ ಕಟ್ಟಡದ 5ನೇ ಮಹಡಿ ಹತ್ತಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೂಗಿಕೊಳ್ಳುತ್ತಾ ಕೆಲ ಕಾಲ ಆತಂಕ ಮೂಡಿಸಿದ್ದಾನೆ.

Advertisement

ದೇವನಹಳ್ಳಿ ನಿವಾಸಿ ಮಂಜುನಾಥ್‌(27) ಆತ್ಮಹತ್ಯೆಗೆ ಯತ್ನಿಸಿದ ಯುವಕ.

ಗುರುವಾರ ಬೆಳಗ್ಗೆ ಸುಮಾರು 9 ಗಂಟೆ ಸುಮಾರಿಗೆ ನಿರ್ಮಾಣ ಹಂತದ ಕಟ್ಟಡ ಹತ್ತಿದ್ದ ಮಂಜುನಾಥ್‌, ನಾನು ಇಲ್ಲಿಂದ ಬಿದ್ದು ಸಾಯುತ್ತೇನೆ. ನನ್ನ ಪತ್ನಿ ಬಿಟ್ಟು ಹೋಗಿದ್ದಾಳೆ. ಅದರಿಂದ ಬೇಸರಗೊಂಡಿದ್ದೇನೆ. ನಾನು ಚೆನ್ನಾಗಿ ಓದುತ್ತಿದ್ದೆ. ನನ್ನನ್ನು ಮೆಂಟಲ್‌ ಆಸ್ಪತ್ರೆಗೆ ಸೇರಿಸಿದ್ದರು ಎಂದು ಕೂಗುತ್ತಿದ್ದ.

ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿ ಶೇಷಾದ್ರಿಪುರ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಆತನನ್ನು ಮನವೊಲಿಸಿದ್ದಾರೆ. ಬಳಿಕ ಆತನ ಪೋಷಕರನ್ನು ಕರೆಸಿಕೊಂಡು ಮನವೊಲಿಸಿ ಕೆಳಗೆ ಇಳಿಸಿ ರಕ್ಷಿಸಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್‌ಗೆ ಮದುವೆಯಾಗಿದ್ದು, ಕೌಟುಂಬಿಕ ವಿಚಾರವಾಗಿ ಪತ್ನಿ ದೂರವಾಗಿದ್ದಾಳೆ. ಅದರಿಂದ ಆತ ಮಾನಸಿಕ ಖನ್ನತೆಗೊಳಗಾಗಿದ್ದ. ಹೀಗಾಗಿ ಆತನಿಗೆ ನಾಲ್ಕೈದು ಬಾರಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂಬುದು ಗೊತ್ತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next