Advertisement

Bengaluru-Kannur ರೈಲು ಕೋಯಿಕ್ಕೋಡ್‌ಗೆ ವಿಸ್ತರಣೆ ಬೇಡ- ಸಂಸದ ನಳಿನ್‌ ಆಗ್ರಹ

01:22 AM Feb 02, 2024 | Team Udayavani |

ಮಂಗಳೂರು: ಬೆಂಗ ಳೂರು-ಮಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್‌ (16511/12) ರೈಲು ಕೋಯಿಕ್ಕೋಡ್‌ಗೆ ವಿಸ್ತರಿಸಿರುವುದು ಸರಿಯಲ್ಲ, ಇದರಿಂದ ಮಂಗಳೂರು ಪ್ರದೇಶದ ರೈಲ್ವೇ ಪ್ರಯಾಣಿಕರಿಗೆ ಅನ್ಯಾಯ ಆಗಲಿದೆ. ಹಾಗಾಗಿ ಮಧ್ಯ ಪ್ರವೇಶಿಸಿ, ಯಥಾ ಸ್ಥಿತಿ ಮುಂದುವರಿಸುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಅವರಿಗೆ ಪತ್ರ ಮೂಲಕ ಆಗ್ರಹಿಸಿದ್ದಾರೆ.

Advertisement

ಈ ರೈಲು ಮಂಗಳೂರು ಮತ್ತು ಬೆಂಗಳೂರು ಮಧ್ಯೆ ಆರಂಭವಾಗಿತ್ತು. ಬಳಿಕ ಈ ಭಾಗದ ಜನರ ವಿರೋಧದ ನಡುವೆಯೇ ರೈಲನ್ನು ಕೇರಳದ ಕಣ್ಣೂರಿಗೆ ವಿಸ್ತರಿಸಲಾಗಿತ್ತು. ಪ್ರಸ್ತುತ ರೈಲು ಮಂಗಳೂರು- ಬೆಂಗಳೂರನ್ನು ಸಂಪರ್ಕಿಸುತ್ತಿದ್ದು, ಬಹುಬೇಡಿಕೆಯ ರೈಲಾಗಿದೆ. ಬಹುತೇಕ ದಿನಗಳಲ್ಲೂ ವೈಟಿಂಗ್‌ ಲಿಸ್ಟ್‌ನಲ್ಲೇ ಇರುತ್ತದೆ. ಹಾಗಾಗಿ ಕಣ್ಣೂರಿನಿಂದಲೂ ದಕ್ಷಿಣಕ್ಕೆ ಕೋಯಿಕ್ಕೋಡ್‌ಗೆ ಈ ರೈಲು ವಿಸ್ತರಣೆ ಮಾಡಿರುವುದಕ್ಕೆ ಜನರಿಂದ ತೀವ್ರ ಪ್ರತಿರೋಧ ಬಂದಿದೆ. ಜನರ ದೂರು ಸಹಜವಾಗಿದ್ದು, ಪರಿಗಣಿಸಲೇಬೇಕು, ಈ ವಿಸ್ತರಣೆಯಿಂದಾಗಿ ಮಂಗಳೂರು ಭಾಗದ ಪ್ರಯಾಣಿಕರಿಗೆ ಟಿಕೆಟ್‌ ಲಭ್ಯವಾಗುವ ಪ್ರಮಾಣ ಕಡಿಮೆಯಾಗಲಿದೆ. ಅಲ್ಲದೆ ಪ್ರಸ್ತುತ 16527/28 ರೈಲು ಕಣ್ಣೂರು-ಬೆಂಗಳೂರು ಮಧ್ಯೆ ಕೋಯಿಕ್ಕೋಡ್‌ ಮೂಲಕವಾಗಿ ಸಂಚರಿಸುತ್ತಿದ್ದು ಕೋಯಿಕ್ಕೋಡ್‌ ಭಾಗದವರಿಗೆ ಸೇವೆಯಲ್ಲಿದೆ. ಹಾಗಾಗಿ ಈ ಹೊಸ ವಿಸ್ತರಣೆ ಅಗತ್ಯವಿರುವುದಿಲ್ಲ ಎಂದು ಪತ್ರದಲ್ಲಿ ನಳಿನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next