Advertisement

ಎಂಜಿನ್‌ ವೈಫಲ್ಯ: ಬೆಂಗಳೂರು- ಕಣ್ಣೂರು ರೈಲು 6 ತಾಸು ವಿಳಂಬ

09:36 AM Oct 03, 2022 | Team Udayavani |

ಮಂಗಳೂರು : ಬೆಂಗಳೂರು – ಕಣ್ಣೂರು ರೈಲಿನ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸುಮಾರು 6 ತಾಸು ಸಂಚಾರ ವಿಳಂಬಗೊಂಡ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.

Advertisement

ಬೆಂಗಳೂರಿನಿಂದ 9.30ಕ್ಕೆ ಹೊರಟ ರೈಲು ಸೋಲೂರು ತಲುಪಿದಾಗ ಎಂಜಿನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಬಳಿಕ ಯಶವಂತಪುರ ದಿಂದ ಬೇರೆ ಎಂಜಿನ್‌ ತರಿಸಿ ಜೋಡಿಸಿ ಸಂಚಾರವನ್ನು ಆರಂಭಿಸಲಾಯಿತು. ಮಂಗಳೂರು ಸೆಂಟ್ರಲ್‌ಗೆ ಬೆಳಗ್ಗೆ 7.10ಕ್ಕೆ ಬರಬೇಕಾಗಿದ್ದ ರೈಲು ಮಧ್ಯಾಹ್ನ 12.15ಕ್ಕೆ ತಲುಪಿದೆ.

ಸಂಚಾರದಲ್ಲಾದ ವಿಳಂಬದಿಂ ದಾಗಿ ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸಬೇಯಿತು. ನವರಾತ್ರಿ ಹಿನ್ನೆಲೆಯಲ್ಲಿ ರವಿವಾರ ರಜೆಯನ್ನು ಬಳಸಿಕೊಂಡು ದಕ್ಷಿಣ ಕನ್ನಡ ಹಾಗೂ ಉಡುಪಿಯ ದೇವಾಲಯಗಳಿಗೆ ಆಗಮಿಸುವ ಹೆಚ್ಚಿನ ಪ್ರಯಾಣಿಕರು ರೈಲಿನಲ್ಲಿದ್ದು, ವಿಳಂಬವಾದ ಕಾರಣ ಪೂರ್ವಯೋಜಿತ ಪ್ರವಾಸದಲ್ಲಿ ವ್ಯತ್ಯಯವಾಗಿವೆ ಎಂದು ಪ್ರಯಾಣಿಕ ರೋರ್ವರು ತಿಳಿಸಿದರು.

ಇದನ್ನೂ ಓದಿ : ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಹೊಂಡಕ್ಕೆ ಥರ್ಮೊಕೋಲ್‌ ಬೇಲಿ!

Advertisement

Udayavani is now on Telegram. Click here to join our channel and stay updated with the latest news.

Next