Advertisement

Crime: ಪತಿಯ ಕೊಂದು ಮತ್ತಲ್ಲಿ ಇರಿದುಕೊಂಡಿದ್ದಾರೆ ಎಂದು ಕಥೆ ಕಟ್ಟಿದ ಪತ್ನಿ!

03:58 PM Dec 22, 2023 | Team Udayavani |

ಬೆಂಗಳೂರು: ಪರ ಪುರುಷನ ಜತೆ ಫೋನ್‌ನಲ್ಲಿ ಮಾತನಾಡುತ್ತಿದ್ದನ್ನು ಪ್ರಶ್ನಿ ಸಿದ ಪತಿ ಯನ್ನು ಪತ್ನಿಯೇ ಚಾಕುವಿ ನಿಂದ ಇರಿದು ಕೊಲೆಗೈದಿ ರುವ ಘಟನೆ ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ನೇಪಾಳ ಮೂಲದ ಉಮೇಶ್‌ ದಾವಿ (30) ಕೊಲೆಯಾದವ. ಪತಿ ಕೊಂದು ಆತನೇ ಕುಡಿದ ಮತ್ತಿನಲ್ಲಿ ಚಾಕುವಿನಿಂದ ಇರಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ಕಥೆ ಕಟ್ಟಿದ ಪತ್ನಿ ಮನಿಷಾ ದಾವಿ(28) ಎಂಬಾಕೆಯನ್ನು ಬಂಧಿಸಲಾಗಿದೆ.

ನೇಪಾಳ ಮೂಲದ ಉಮೇಶ್‌ ದಾವಿ ಮತ್ತು ಮನಿಷಾ ಪ್ರೀತಿಸಿ 6 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ 5 ವರ್ಷದ ಮಗು ಇದೆ. ಉಮೇಶ್‌, ಅಕ್ಷಯನಗರದ ಎಲೇನಹಳ್ಳಿ ಯಲ್ಲಿರುವ ಕಾಲೇಜೊಂದರಲ್ಲಿ ಸೆಕ್ಯೂರಿಟಿ ಗಾರ್ಡ್‌ ಕೆಲಸ ಮಾಡುತ್ತಿದ್ದರು. ಅದೇ ಕಾಲೇಜಿನಲ್ಲಿ ಮನಿಷಾ ಸ್ವಚ್ಚತಾ ಸಿಬ್ಬಂದಿಯಾಗಿದ್ದಳು. ಹೀಗಾಗಿ ದಂಪತಿ ಮಗುವಿನ ಜತೆ ಕಾಲೇಜಿನ ಸಣ್ಣ ಕೋಣೆಯಲ್ಲಿ ವಾಸವಾಗಿದ್ದರು.

ಈ ಮಧ್ಯೆ ಮನಿಷಾ, ಫೋನ್‌ನಲ್ಲಿ ಪರ ಪುರುಷನ ಜತೆ ತಡರಾತ್ರಿವರೆಗೂ ಮಾತನಾಡುತ್ತಿದ್ದಳು. ಮದ್ಯವ್ಯಸನಿಯಾಗಿದ್ದ ಉಮೇಶ್‌ ಅದನ್ನು ಗಮನಿಸಿ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದ.

ಅಲ್ಲದೆ, ಇದೇ ವಿಚಾರವಾಗಿ ದಂಪತಿ ನಡುವೆ ಬಾರಿ ಜಗಳ ನಡೆದಿದೆ. ಬುಧವಾರ ರಾತ್ರಿ ಉಮೇಶ್‌ ಸಂಬಂಧಿಯೊಬ್ಬರ ಹುಟ್ಟುಹಬ್ಬದ ಪಾರ್ಟಿಗೆ ಉತ್ತರಹಳ್ಳಿಗೆ ಹೋಗಿದ್ದು, ತಡರಾತ್ರಿ 2ಗಂಟೆ ಸುಮಾರಿಗೆ ಕುಡಿದು ಮನೆಗೆ ಬಂದಿದ್ದಾನೆ. ಆಗಲೂ ಮನಿಷಾ ಫೋನ್‌ನಲ್ಲಿ ಯಾರೊಂದಿಗೂ ಮಾತನಾಡುತ್ತಿದ್ದಳು. ಅದನ್ನು ಕಂಡ ಉಮೇಶ್‌, “ಯಾರೊಂದಿಗೆ ಮಾತನಾಡುತ್ತಿದ್ದೆ’ ಎಂದು ಪ್ರಶ್ನಿಸಿ ಆಕೆ ಜತೆ ಜಗಳ ಆರಂಭಿಸಿದ್ದಾರೆ. ಅದು ವಿಕೋಪಕ್ಕೆ ಹೋದಾಗ ಆಕ್ರೋಶಗೊಂಡ ಮನಿಷಾ, ಅಡುಗೆ ಕೋಣೆಯಲ್ಲಿದ್ದ ಚಾಕುವಿನಿಂದ ಪತಿ ಉಮೇಶ್‌ನ ಎದೆಗೆ ಇರಿದಿದ್ದು, ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement

ಪೊಲೀಸರಿಗೆ ಸುಳ್ಳು ಹೇಳಿಕೆ:

ನಸುಕಿನ 3 ಗಂಟೆ ಸುಮಾರಿಗೆ ವಿಚಾರ ತಿಳಿದ ಹುಳಿಮಾವು ಪೊಲೀಸರು ಸ್ಥಳಕ್ಕೆ ಹೋದಾಗ, ಮನಿಷಾ ಗಲಾಟೆ ನಡುವೆ ಮದ್ಯದ ಅಮಲಿನಲ್ಲಿ ಚಾಕುವಿನಿಂದ ಇರಿದುಕೊಂಡಿದ್ದಾರೆ ಎಂದು ಸುಳ್ಳು ಹೇಳಿದ್ದಳು. ಆದರೆ, ಘಟನಾ ಸ್ಥಳದಲ್ಲಿ ದೊರೆತ ಕೆಲ ಸಾಕ್ಷ್ಯಗಳು ಮನಿಷಾ ಕೊಲೆಗೈದಿದ್ದಾಳೆ ಎಂಬ ಅನುಮಾನದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next