Advertisement

Crime: ಮನೆಯಲ್ಲಿ ನೇಣುಬಿಗಿದುಕೊಂಡು ಮಾಜಿ ಕಾರ್ಪೊರೇಟರ್‌ ಪುತ್ರ ಗೌತಮ್‌ ಆತ್ಮಹತ್ಯೆ

10:49 AM Aug 11, 2023 | Team Udayavani |

ಬೆಂಗಳೂರು: ಮಾಜಿ ಕಾರ್ಪೋರೇಟರ್‌ ಪುತ್ರ ಗೌತಮ್‌(29) ಎಂಬವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಂದ್ರಾ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

Advertisement

ಅತ್ತಿಗುಪ್ಪೆಯ ಮಾಜಿ ಕಾರ್ಪೊರೇಟರ್‌ ದೊಡ್ಡಣ್ಣ ಅವರ ಮೂರನೇ ಪುತ್ರ ಗೌತಮ್‌ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ದೊಡ್ಡಣ್ಣ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ದೊಡ್ಡಣ್ಣ ಅವರಿಗೆ ಮೂವರು ಪುತ್ರರಿದ್ದು, ಅದರಲ್ಲಿ ಕೊನೆಯವರು ಗೌತಮ…. ಬುಧವಾರ ಮಧ್ಯಾಹ್ನ 1 ಗಂಟೆಗೆ ಊಟ ಮುಗಿಸಿಕೊಂಡು ಕೋಣೆಗೆ ಹೋದ ಗೌತಮ್‌, ಗುರುವಾರ ಮಧ್ಯಾಹ್ನವಾದರೂ ಹೊರಗಡೆ ಬಂದಿಲ್ಲ. ಹೀಗಾಗಿ ಊಟಕ್ಕೆ ಕರೆಯಲು ಅವರ ಸಹೋದರ ಕೋಣೆ ಬಳಿ ಹೋಗಿ, ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಅನುಮಾನಗೊಂಡ ಸಹೋದರ, ಒಳಗಿನಿಂದ ಬಾಗಿಲು ಲಾಕ್‌ ಆಗಿದ್ದನ್ನು ಕಂಡು, ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್‌ ಆಫ್ ಆಗಿತ್ತು. ನಂತರ, ಸಹೋದರರೇ ಬಾಗಿಲು ಮುರಿದು ಒಳಗೆ ಹೋಗಿದ್ದರು. ಕೊಠಡಿಯಲ್ಲಿದ್ದ ಫ್ಯಾನ್‌ಗೆ ನೇಣು ಹಾಕಿಕೊಂಡು ಗೌತಮ್‌ ಮೃತಪಟ್ಟಿದ್ದು ಕಂಡಿತ್ತು. ವಿಷಯ ಗೊತ್ತಾಗುತ್ತಿದ್ದಂತೆ ಮನೆಗೆ ಹೋಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹಲವು ದಿನಗಳಿಂದ ಮಗ ಗೌತಮ್‌ ಯಾರ ಜತೆಗೂ ಮಾತನಾಡುತ್ತಿರಲಿಲ್ಲ. ಒಂಟಿಯಾಗಿರುತ್ತಿದ್ದ. ಈ ಬಗ್ಗೆ ವಿಚಾರಿಸಿದಾಗ, ಏನು ಹೇಳುತ್ತಿರಲಿಲ್ಲ. ಮಗ ಯಾವ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಿಲ್ಲ. ಮಗನ ಸಾವಿನಲ್ಲಿ ನಮಗೆ ಯಾವುದೇ ಅನುಮಾನವಿಲ್ಲ’ ಎಂದು ತಂದೆ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಚಂದ್ರಾಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಇದನ್ನೂ ಓದಿ: Crime: ಬುಕ್ ಮಾಡಿದ ಕ್ಯಾಬ್ ಬಿಟ್ಟು ಬೇರೆ ಕಾರಿಗೆ ಹತ್ತಿದ ಮಹಿಳೆ… ಚಾಲಕನಿಂದ ಕಪಾಳಮೋಕ್ಷ

Advertisement

Udayavani is now on Telegram. Click here to join our channel and stay updated with the latest news.

Next