Advertisement

Cafe ಬಾಂಬ್ ಸ್ಪೋಟ: ಕರಾವಳಿ ತೀರದಲ್ಲೂ ಅಲರ್ಟ್

01:56 PM Mar 09, 2024 | Team Udayavani |

ಮಂಗಳೂರು: ಬೆಂಗಳೂರಿನ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟದ ಆರೋಪಿಯ ಪತ್ತೆಗೆ ಭದ್ರತಾ ಪಡೆಗಳು ತೀವ್ರ ನಿಗಾ ವಹಿಸಿದ್ದು, ಕರಾವಳಿ ತೀರದಲ್ಲಿ ಕರಾವಳಿ ಕಾವಲು ಪೊಲೀಸರು ಅಲರ್ಟ್ ಆಗಿದ್ದಾರೆ.

Advertisement

ಬೋಟ್ ಗಳು, ತೀರದ ಸನಿಹವಿರುವ ಬಾಡಿಗೆ ಮನೆಗಳ ಮೇಲೆಯೂ ಕಣ್ಣಿಟ್ಟಿದ್ದಾರೆ. ಈಗಾಗಲೆ ಎನ್ಐಎ ಆರೋಪಿ ಪತ್ತೆಗೆ ಸಾರ್ವಜನಿಕರ ನೆರವು ಕೋರಿದೆ. ಅಲ್ಲದೆ ಎಲ್ಲ ಭದ್ರತಾ ಏಜೆನ್ಸಿಗಳು ವಿಶೇಷ ನಿಗಾ ವಹಿಸುವಂತೆ ಸೂಚಿಸಿದೆ.

ಮುಂಬೈ ದಾಳಿ ಸಂದರ್ಭದಲ್ಲಿ ಭಯೋತ್ಪಾದಕ ಕಸಬ್ ಬೋಟ್ ನಲ್ಲಿ ಬಂದಿದ್ದ. ಇದೇ ರೀತಿ ಬೆಂಗಳೂರು ಸ್ಪೋಟದ ಆರೋಪಿ ಕೂಡ ಕಣ್ತಪ್ಪಿಸಲು ಜಲ ಮಾರ್ಗ ಕೂಡ ಬಳಸಬಹುದು ಎಂಬ ಗುಮಾನಿ ಮೇರೆಗೆ ಕಟ್ಟೆಚ್ಚರ ವಹಿಸಲಾಗಿದೆ. ಹೊರಭಾಗದ ಕಾರ್ಮಿಕರ ಮಾಹಿತಿಗಳನ್ನು ಕೂಡ ಕಲೆ ಹಾಕಲಾಗುತ್ತಿದೆ. ಯಾವುದಾದರೂ ಬೋಟ್ ನಲ್ಲಿ ಅಪರಿಚಿತರು ಮೀನುಗಾರರಂತೆ ತೆರಳಿದ್ದರೇ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next