Advertisement

ಪ್ರಾಣಾಯಾಮದಿಂದ ಪ್ರಯೋಜನವುಂಟು…

01:52 PM May 05, 2020 | mahesh |

ಯೋಗಕ್ಕೂ ರೋಗಕ್ಕೂ ನಂಟಿದೆ. ದೇಹದೊಳಗೆ ಹರಡಿರುವ ರೋಗ, ನಮಗೆ ಹೇಳದೇ ಕೇಳದೇ ಹೋಗಬೇಕು ಅಂದರೆ, ಯೋಗ ಮಾಡಬೇಕು. ರೋಗ ಓಡಿಸೋಕೂ ಮೊದಲು ಮನಸ್ಸನ್ನು ಗಟ್ಟಿಯಾಗಿಟ್ಟುಕೊಳ್ಳಬೇಕು. ಅಂದರೆ, ಪ್ರಾಣಾಯಾಮ ಮಾಡಲೇಬೇಕು. ಸುಖಪ್ರಾಣಾಯಾಮವನ್ನು ಎಲ್ಲರೂ ಮಾಡ್ತಾರೆ. ನಾವು ಸಾಮಾನ್ಯವಾಗಿ ಉಸಿರಾಡುವುದನ್ನೇ ಗಮನವಿಟ್ಟು, ವ್ಯವಸ್ಥಿತವಾಗಿ ಉಸಿರಾಡುವುದೇ ಸುಖಪ್ರಾಣಾಯಾಮ. ತನ್ನ ಕೈ ಕೆಳಗಿನ ಉದ್ಯೋಗಿಗಳು ಹೇಗೆ ಕೆಲಸ ಮಾಡುತ್ತಾರೆ ಅಂತ ಬಾಸ್‌ ನೋಡ್ತಾರಲ್ಲ; ಆರೀತಿ ಇದು. ಪ್ರಾಣಾಯಾಮಕ್ಕೆ
ಕುಳಿತಾಗ, ಉಸಿರ ಮೇಲೆ ಗಮನ ಕೊಡಿ. ಉಸಿರನ್ನು ಒಳಗೆ ತೆಗೆದುಕೊಂಡಾಗ, ಹೊಟ್ಟೆ ಉಬ್ಬಬೇಕು, ಬಿಟ್ಟಾಗ ಪೂರ್ತಿ ಖಾಲಿಯಾಗಬೇಕು. ಇದನ್ನು ಗಮನಿಸುತ್ತಲೇ, ಕುಂಭಕವನ್ನು ಮಾಡಬೇಕಾಗುತ್ತದೆ. ಕುಂಭಕ ಅಂದರೆ, ಮತ್ತೇನಿಲ್ಲ. ಉಸಿರನ್ನು ಎಳೆದುಕೊಂಡ ನಂತರ, ಬಿಡುವ ಮೊದಲು ಸ್ವಲ್ಪ ಹೊತ್ತು ಒಳಗೇ ಇಟ್ಟುಕೊಳ್ಳುವುದು. ಇದನ್ನು ಕುಂಭಕ ರೇಚಕ ಅಂತಾರೆ. ಉಸಿರನ್ನು ಪೂರ್ತಿ ಬಿಟ್ಟು ಒಂದು ನಿಮಿಷದ ನಂತರ ಎಳೆದುಕೊಳ್ಳುವುದಕ್ಕೆ ಕುಂಭಕ ಪೂರಕ ಅಂತಾರೆ.

Advertisement

ಪ್ರಾಣಾಯಾಮದ ಜೊತೆಗೇ ವೀರಾಸನವನ್ನೂ ಮಾಡಿ. ಅದು ಹೀಗೆ- ಎರಡೂ ಕಾಲುಗಳನ್ನು ಚಾಚಿ ನೇರವಾಗಿ ಕುಳಿತುಕೊಳ್ಳಿ. ಬಲಗಾಲನ್ನು ಹಿಂದಕ್ಕೆ ಮಡಚಿ, ಪಕ್ಕಕ್ಕೆ ಇಟ್ಟುಕೊಳ್ಳಿ. ಬಲಪಾದ ಕಾಲಿನ ನೇರಕ್ಕಿರಲಿ. ಮಂಡಿಗಳನ್ನು ಸಾಧ್ಯವಾದಷ್ಟು ಹತ್ತಿರ ತನ್ನಿ. ಈ ಭಂಗಿಯಲ್ಲಿ ಉಸಿರಾಡುತ್ತಾ, ಎರಡು ನಿಮಿಷ ಹಾಗೇ ಕುಳಿತುಕೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next