Advertisement

ಈಶ್ವರಪ್ಪ ನಂಬ್ಕೊಂಡು ಪಕ್ಷಕ್ಕೆ ಹೋದ್ರೇ ಏನು ಆಗಲ್ಲ, ಯಾರಿಗೂ ಅಧಿಕಾರ ಕೊಡ್ಸಲ್ಲ: ಬೇಳೂರು

02:17 PM Sep 29, 2020 | sudhir |

ಶಿವಮೊಗ್ಗ : ಈಶ್ವರಪ್ಪ ಅವರನ್ನು ನಂಬಿಕೊಂಡು ಪಕ್ಷಕ್ಕೆ ಹೋದರೆ ಅವರು ಯಾರಿಗೂ ಅಧಿಕಾರ ಕೊಡಲ್ಲ ಕೇವಲ ಅವರ ಮಗನಿಗೆ ಮಾತ್ರ ಅಧಿಕಾರ ಕೊಡಿಸುವ ಕೆಲಸ ಮಾಡುತ್ತಾರೆ ಹೊರತು, ಕುರುಬ ಸಮಾಜಕ್ಕೂ ಸಹ ಏನು ಮಾಡಿಲ್ಲಎಂದು ಈಶ್ವರಪ್ಪ ಹಾಗೂ ಸರಕಾರದ ವಿರುದ್ಧ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾಗಿರುವ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.

Advertisement

ಸರ್ಕಾರದ ವಿರುದ್ಧ ಗುಡುಗಿದ ಬೇಳೂರು ಈ ಬಿಜೆಪಿ ಸರ್ಕಾರ ಬರೋ ಮುಂಚೆ ಪ್ರಣಾಳಿಕೆಯೊಂದನ್ನು ಕೊಟ್ಟಿತ್ತು, ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಗೋ ಹತ್ಯೆ ನಿಷೇಧ ಮಾಡ್ತಿವಿ ಎಂದಿದ್ರೂ ಆದ್ರೇ, ಈವರೆಗೂ ಗೋ ಹತ್ಯೆ ನಿಷೇಧ ಮಾಡಿಲ್ಲ. ಯಾಕಂದರೇ ಇದು ಬಿಜೆಪಿಯವರಿಗೆ ಇಷ್ಟವಿಲ್ಲ. ತಮ್ಮ ಬೇಳೆ ಬೇಯಿಸಿಕೊಳ್ಳೋದಕ್ಕೆ, ರಾಜಕೀಯಕ್ಕಾಗಿ ಈ ಗೋಹತ್ಯೆ ವಿಷಯ ಇಟ್ಟುಕೊಂಡಿದ್ದಾರೆ ಎಂದು ಸರಕಾರದ ವಿರುದ್ಧ ಗುಡುಗಿದ್ದಾರೆ.

ಈಶ್ವರಪ್ಪ ಸಹ ಎಷ್ಟು ಕಿರುಚಾಡಿ ದ್ರೂ ಯಾವುದು ಮಾಡಿಲ್ಲ, ಕೇವಲ ರಾಜಕೀಯ ತಂತ್ರ ಅಷ್ಟೇ. ನೀವೆಲ್ಲಾ ಷಂಡರು, ಹೋಗಿ ಎಲ್ಲರೂ ಸೀರೆ ಉಟ್ಕೋಬೇಕು.

ಮರ್ಯಾದೆ ಇದೆಯಾ ನಿಮಗೆ…? ದುಡ್ಡು ಹಾಗೂ ಭ್ರಷ್ಟಾಚಾರ ಮಾಡೋದು ಒಂದು ಚಿಂತೆ. ಬಿಜೆಪಿಯವರು ಹೇಳಿದ್ದು, ಯಾವುದು ಮಾಡಲ್ಲ. ಕೇವಲ ರಾಜಕೀಯ ತಂತ್ರವಷ್ಟೇ. ಚುನಾವಣೆ ಬಂದಾಗ ರಾಮ ಮಂದಿರ, ಈವಾಗ ಮಥುರಾ ಬಗ್ಗೆ ಪ್ರಾರಂಭಿಸಿದ್ದಾರೆ ಯಡಿಯೂರಪ್ಪ ಅವರ ಸರ್ಕಾರಕ್ಕೆ ತಾಕತ್ತು, ಧಮ್ ಇಲ್ಲ ಎಂದು ಬೇಳೂರು ವ್ಯಂಗ್ಯವಾಡಿದರು.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next