Advertisement

ಬೇಳೂರು ಜತೆ ಸಂಧಾನ ಇಲ್ಲ:ಹರತಾಳು ಹಾಲಪ್ಪ

06:50 AM Apr 21, 2018 | |

ಸಾಗರ: ಬೇಳೂರು ಗೋಪಾಲಕೃಷ್ಣ ಅವರೊಂದಿಗೆ ಸಂಧಾನದ ಪ್ರಶ್ನೆಯೇ ಇಲ್ಲ ಎಂದು ಸಾಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಹೇಳಿದರು.

Advertisement

ನಾಮಪತ್ರ ಸಲ್ಲಿಕೆ ನಂತರ ಮಾತನಾಡಿ,ಬೇಳೂರು ಗೋಪಾಲಕೃಷ್ಣ ಜತೆ ಮಾತುಕತೆ ನಡೆಸುವುದಾಗಿ ಹೇಳಿದ್ದು ನಿಜ. ಆದರೆ ಈಗ ಅವರು ರಾಜೀನಾಮೆ ಮಾತು ಹೇಳಿದ್ದಾರೆ. ನಮ್ಮ ಪಕ್ಷದ ನಾಯಕರ ಬಗ್ಗೆ ಸಲ್ಲದ ಆರೋಪ ಮಾಡಿದ್ದಾರೆ. ಈ ಹಂತದಲ್ಲಿ ನನ್ನ ಹಾಗೂ ನನ್ನ ಸ್ನೇಹಿತರ ಮಟ್ಟದಲ್ಲಿ ಸಂಧಾನ ನಡೆಯುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜೀನಾಮೆ, ಪಕ್ಷಾಂತರ, ಬಂಡಾಯದಿಂದ ಸ್ಥಳೀಯ ಬಿಜೆಪಿ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ ಎಂದು ಹೇಳಿದರು. ಕಾಗೋಡು ತಿಮ್ಮಪ್ಪ ಅವರ ಬಗ್ಗೆ ಮೃದುಧೋರಣೆ ಇಲ್ಲ. ಯಡಿಯೂರಪ್ಪ, ಕಾಗೋಡು ವಯಸ್ಸು, ಹೋರಾಟದ ಬದುಕನ್ನು ಗಮನದಲ್ಲಿರಿಸಿ ಕೊಂಡು ಟೀಕೆ ಮಾಡುವುದು ಉತ್ತಮ ಎಂದು ಬೇಳೂರಿಗೆ ಟಾಂಗ್‌ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next