Advertisement

ಬಿಎಸ್‌ವೈ ಕೇರಳಕ್ಕೆ ಹೋಗಿದ್ದು ಮಾಟ ಮಾಡಿಸಲು: ಬೇಳೂರು

06:35 AM Dec 02, 2018 | Team Udayavani |

ಶಿವಮೊಗ್ಗ: ಯಡಿಯೂರಪ್ಪ ಯಾವುದೇ ಚಿಕಿತ್ಸೆ ಪಡೆಯಲೆಂದು ಕೇರಳಕ್ಕೆ ತೆರಳಲಿಲ್ಲ. ಬದಲಾಗಿ ಮಾಟ, ಮಂತ್ರ ಮಾಡಿಸಲು ಹೋಗಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತೆ ವಾಗ್ಧಾಳಿ ನಡೆಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲೇ ಜಿಂದಾಲ್‌ ಸೇರಿ ಅನೇಕ ಪ್ರಕೃತಿ ಚಿಕಿತ್ಸಾ ಕೇಂದ್ರಗಳಿವೆ. ಅದನ್ನು ಬಿಟ್ಟು ಕೇರಳಕ್ಕೆ ಹೋಗಿರುವುದು ಏಕೆಂದು ಪ್ರಶ್ನಿಸಿದರು. ಅಲ್ಲಿ ಕೈಗೆ ಪಟ್ಟಿ ಕಟಾ¤ರಂತೆ, ಅದನ್ನು ಕಟ್ಟಿಸಿಕೊಂಡರೆ ಶತ್ರುಗಳನ್ನು ಎದುರಿಸುವ ಶಕ್ತಿ ಬರುತ್ತಂತೆ. ಆದರೆ ಏನೇ ಮಾಟ, ಮಂತ್ರ ಮಾಡಿಸಿದರೂ ಸಮ್ಮಿಶ್ರ ಸರ್ಕಾರಕ್ಕೆ ಏನೂ ಹಾನಿ ಮಾಡಲು ಸಾಧ್ಯವಿಲ್ಲ. ಸರ್ಕಾರ ಭದ್ರವಾಗಿದೆ ಎಂದು ಹೇಳಿದರು.

ಇತ್ತೀಚೆಗೆ ರೈತರು ವಿಧಾನಸೌಧ ಬೀಗ ಒಡೆಯಲು ಮುಂದಾದಾಗ ಅವರು ರೈತರು, ಗೂಂಡಾಗಳಲ್ಲ ಅವರನ್ನು ಬಿಡಬೇಕು ಅಂತ ಹೇಳುತ್ತೀರಿ. ನಿಮಗೆ ಎರಡು ನಾಲಿಗೆ ಇದೆಯಾ. ಹಾಗಾದ್ರೆ ರೈತರು ಏನು ಬೇಕಾದ್ರೂ ಮಾಡಬಹುದಾ. ರೈತರು ವಿಧಾನಸೌಧಕ್ಕೆ ನುಗ್ಗಬಹುದಾದರೆ, ನಾವು ಯಡಿಯೂರಪ್ಪನವರ ಮನೆಗೆ ನುಗ್ಗಬಹುದಲ್ಲವೇ? ಡಿ.3ರಂದು ನಾವು ಬಿಎಸ್‌ವೈ ಮನೆಗೆ ಮುತ್ತಿಗೆ ಹಾಕ್ತೀವಿ ಎಂದರು. 

ಮುಖ್ಯಮಂತ್ರಿಯಾಗಿದ್ದಾಗ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್‌ ಮಾಡಿದಾಗ ಅವರು ರೈತರು ಅಂತ ಅನ್ನಿಸಲಿಲ್ಲವೇ? ಅಪ್ಪ-ಮಕ್ಕಳು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳು ಹೇಳುವ ಸ್ಪರ್ಧೆ ಇಟ್ಟರೆ ಅಪ್ಪ ಮಕ್ಕಳೇ ಮೂರೂ ಬಹುಮಾನ ಹೊಡೀತಾರೆ ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next