Advertisement

ಬೆಳ್ತಂಗಡಿ: ರಾಜ್ಯ ಹೆದ್ದಾರಿಗೆ ಹರಿಯುತ್ತಿದೆ ಕಚ್ಚಾರಸ್ತೆ ಮಣ್ಣು

11:21 AM May 21, 2018 | |

ಬೆಳ್ತಂಗಡಿ : ತಾಲೂಕಿನ ವಿವಿಧೆಡೆ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆಗಳ ಮಣ್ಣು ಹರಿಯುತ್ತಿದ್ದು, ದ್ವಿಚಕ್ರ ವಾಹನ ಸವಾರರಿಗೆ ಅಪಾಯ ತಂದೊಡ್ಡಿದೆ. ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಹಲವೆಡೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆಗಳಿಂದ ನೀರು ಹರಿದು ಹೆದ್ದಾರಿಯನ್ನು ಸೇರುತ್ತಿದೆ. ಈ ವೇಳೆ ರಸ್ತೆಗೆ ಹಾಕಿರುವ ಮಣ್ಣೂ ಡಾಂಬರು ರಸ್ತೆಯನ್ನು ಸೇರುತ್ತಿದ್ದು, ವಾಹನ ಸವಾರರು ವಾಹನ ಜಾರಿ ಬೀಳುವ ಹೆದರಿಕೆಯಲ್ಲೇ ವಾಹನ ಚಾಲನೆ ಮಾಡಬೇಕಾಗಿದೆ. ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಗಮನಿಸದೆ ಚಲಿಸಿ ಸ್ಕಿಡ್‌ ಆಗಿ ಬೀಳುವ ಸಂಭವಗಳೂ ಹೆಚ್ಚಾಗಿವೆ.

Advertisement

ತಾಲೂಕಿನ ಕೆಲವು ಭಾಗಗಳ ತಿರುವುಗಳಲ್ಲಿ ಇಂತಹ ಪರಿಸ್ಥಿತಿಯಿದ್ದು, ಈಗಾಗಲೇ ಹಲವು ಮಂದಿ ಜಾರಿ ಬಿದ್ದಿರುವ ಪ್ರಕರಣಗಳೂ ನಡೆದಿವೆ. ಮಳೆಗಾಲ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಹೆಚ್ಚಿನ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಳ್ಳುವುದು ಅಗತ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next