Advertisement

ಶಿಕ್ಷಣ ಸಚಿವ, ಪಿಯು ಬೋರ್ಡ್‌ ನಿರ್ದೇಶಕರ ನೇಮಕಕ್ಕೆ  ಆಗ್ರಹ

03:11 PM Dec 16, 2018 | |

ಬೆಳ್ತಂಗಡಿ : ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಸಚಿವರನ್ನು ನೇಮಿಸಬೇಕು, ಜತೆಗೆ ಪ.ಪೂ. ಶಿಕ್ಷಣ ಇಲಾಖೆಗೆ ನಿರ್ದೇಶಕರನ್ನು ನೇಮಿಸುವಂತೆ ಆಗ್ರಹಿಸಿ ಬೆಳ್ತಂಗಡಿ ತಾಲೂಕು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ಇಲ್ಲಿನ ಬಸ್‌ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು.

Advertisement

ಪ್ರತಿಭಟನೆಯನ್ನುದ್ದೇಶಿಸಿ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ತೀಕ್ಷಿತ್‌ ಕೆ. ದಿಡುಪೆ ಮಾತನಾಡಿ, ಪ.ಪೂ. ಶಿಕ್ಷಣ ಇಲಾಖೆಗೆ ನಿರ್ದೇಶಕರಿಲ್ಲದೆ ವರ್ಷಗಳೇ ಕಳೆದರೂ ಇನ್ನೂ ರಾಜ್ಯ ಸರಕಾರ ನಿರ್ದೇಶಕರ ನೇಮಕಕ್ಕೆ ಮುಂದಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ಸಾಕಷ್ಟು ಗೊಂದಲದಲ್ಲಿದ್ದಾರೆ. ಜತೆಗೆ ಶಿಕ್ಷಣ ಸಚಿವರ ರಾಜೀನಾಮೆ ಬಳಿಕ ಇನ್ನೂ ಹೊಸ ಸಚಿವರನ್ನೂ ನೇಮಿಸಿಲ್ಲ. ಪ್ರಶ್ನೆಪತ್ರಿಕೆ ಹಗರಣದ ಆರೋಪಿ ಶಿವಕುಮಾರ್‌ಗೆ ಶಿಕ್ಷೆ ವಿಧಿಸಬೇಕು. ಈ ಎಲ್ಲ ವಿಚಾರಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಎಬಿವಿಪಿ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯ ಆರಂಭದಲ್ಲಿ ಇಲ್ಲಿನ ಸಂತೆಕಟ್ಟೆಯಿಂದ ಬೆಳ್ತಂಗಡಿ ಬಸ್‌ ನಿಲ್ದಾಣದವರೆಗೆ ಪ್ರತಿಭಟನ ಜಾಥಾ ನಡೆಯಿತು. ಬಳಿಕ ಮಿನಿ ವಿಧಾನಸೌಧಕ್ಕೆ ತೆರಳಿ ಮನವಿ ನೀಡಲಾಯಿತು. ಪ್ರತಿಭಟನೆಯಲ್ಲಿ ಎಬಿವಿಪಿ ತಾಲೂಕು ಸಂಚಾಲಕ ಅಜಯ್‌ ಪ್ರಭು, ಸಹಸಂಚಾಲಕ ನಾಗೇಶ್‌ ಗೌಡ ಕಲ್ಮಂಜ, ನಗರ ಕಾರ್ಯದರ್ಶಿ ಭಗತ್‌, ಉಜಿರೆ ನಗರ ಕಾರ್ಯದರ್ಶಿ ವಿಘ್ನೇಶ್‌, ವಿದ್ಯಾರ್ಥಿನಿ ಪ್ರಮುಖ್‌ ಭಾರತಿ ಮೊದಲಾದವರು ಉಪಸ್ಥಿತರಿದ್ದರು.

ಸಿಎಂಗೆ ಮನವಿ
ಪ್ರತಿಭಟನೆಯ ಬಳಿಕ ಶಾಸಕ ಹರೀಶ್‌ ಪೂಂಜ, ಪುತ್ತೂರು ಸಹಾಯಕ ಕಮೀಷನರ್‌ ಡಾ| ಎಚ್‌.ಕೆ. ಕೃಷ್ಣಮೂರ್ತಿ ಅವರ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿಯ ನಿರ್ಗಮಿತ ತಹಶೀಲ್ದಾರ್‌ ಮದನ್‌ ಮೋಹನ್‌ ಸಿ., ನ.ಪಂ. ಸದಸ್ಯ ಜಯಾನಂದ ಗೌಡ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next