Advertisement

Belthangady: ನಿಯಂತ್ರಣ ಕಳೆದುಕೊಂಡ ಬೈಕ್‌ ಕಾರಿಗೆ ಢಿಕ್ಕಿ

12:12 AM Aug 22, 2023 | Team Udayavani |

ಬೆಳ್ತಂಗಡಿ:ನಿಯಂತ್ರಣ ಕಳೆದುಕೊಂಡ ಬೈಕ್‌ ಸ್ಕಿಡ್‌ ಆಗಿ ಸವಾರ ರಸ್ತೆಗೆ ಎಸೆಯಲ್ಪಟ್ಟ ಬಳಿಕ ಬೈಕ್‌ ಇನ್ನೋವಾ ಕಾರಿಗೆ ಢಿಕ್ಕಿ ಹೊಡೆದ ಘಟನೆ ಪಿಲ್ಯ ಸಮೀಪ ಆ. 20ರಂದು ನಡೆದಿದೆ.

Advertisement

ರಸ್ತೆಗೆ ಎಸೆಯಲ್ಪಟ್ಟ ಬೈಕ್‌ ಸವಾರ ಸ್ಥಳೀಯ ನಿವಾಸಿ ವಿಘ್ನೇಶ್ (22) ಗಂಭೀರವಾಗಿ ಗಾಯಗೊಂಡಿದ್ದಾರೆ.

ತತ್‌ಕ್ಷಣ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಇನ್ನೋವಾ ಕಾರಿನ ಮಾಲಕ ಲಾಯಿಲದ ಪ್ರಕಾಶ್‌ ಕಾಶಿಬೆಟ್ಟು ಬೈಕ್‌ ಸವಾರನ ವಿರುದ್ಧ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next