Advertisement

Belthangadi: ಹಾಡಹಗಲೇ ಮನೆಯಿಂದ 15 ಪವನ್‌ ಚಿನ್ನಾಭರಣ, 20 ಸಾ. ರೂ. ಕಳವು

10:21 PM Aug 12, 2023 | Team Udayavani |

ಬೆಳ್ತಂಗಡಿ: ಯಾರೂ ಇಲ್ಲದ ವೇಳೆ ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ನಗ ಮತ್ತು ನಗದು ಕಳವುಗೈದ ಘಟನೆ ಉಜಿರೆ ಕಲ್ಲೆ ಎಂಬಲ್ಲಿ ಆ.12ರಂದು ನಡೆದಿದೆ.

Advertisement

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕಲ್ಲೆ ನಿವಾಸಿ ಫೇಲಿಕ್ಸ್‌ ಅವರ ಮನೆಯಿಂದ 15 ಪವನ್‌ ಚಿನ್ನಾಭರಣ ಹಾಗೂ 20,000 ರೂ. ಕಳವಾಗಿದೆ ಎಂದು ದೂರು ದಾಖಲಾಗಿದೆ. ಫೇಲಿಕ್ಸ್‌ ಅವರ ಪುತ್ರಿ ಕಾಲೇಜು ಮುಗಿದ ಬಳಿಕ ಮಧ್ಯಾಹ್ನ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಫೆಲಿಕ್ಸ್‌ ಮೇಲಂತಬೆಟ್ಟು ಬಳಿ ಸೆಂಟ್ರಿಂಗ್‌ ಕೆಲಸಕ್ಕೆ ಹೋಗಿದ್ದು, ಪತ್ನಿ ಗ್ರೇಟಾ ಸ್ಥಳೀಯ ಶಾಲೆಯಲ್ಲಿ ಕೆಲಸಕ್ಕೆ ತೆರಳಿದ್ದರು.

ಮನೆಯ ಹಿಂಬಾಗಿಲ ಮೂಲಕ ಕಳ್ಳರು ಒಳಗೆ ನುಗ್ಗಿದ್ದಾರೆ. ಸಮೀಪದ ಇನ್ನೆರಡು ಮನೆಗಳಲ್ಲೂ ಕಳವು ಯತ್ನ ನಡೆದಿದೆ ಎಂದು ತಿಳಿದಬಂದಿದೆ.

ಘಟನಾ ಸ್ಥಳಕ್ಕೆ ಮಂಗಳೂರು ಬೆರಳಚ್ಚು ತಜ್ಞರ ವಿಭಾಗದ ಡಿವೈಎಸ್‌ಪಿ ಗೌರೀಶ್‌, ಸಿಬಂದಿ, ಶ್ವಾನ ದಳ, ಮಂಗಳೂರು ಎಫ್‌ಎಸ್‌ಎಲ್‌ ವಿಭಾಗ ಹಾಗೂ ಬೆಳ್ತಂಗಡಿ ವೃತ್ತನಿರೀಕ್ಷಕ ನಾಗೇಶ್‌ ಕದ್ರಿ, ಬೆಳ್ತಂಗಡಿ ಉಪನಿರೀಕ್ಷಕ ಧನ್‌ರಾಜ್‌, ಸಂಚಾರ ಠಾಣೆ ಉಪನಿರೀಕ್ಷಕ ಅರ್ಜುನ್‌ ಮತ್ತು ಸಿಬಂದಿ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ತನಿಖೆ ಮುಂದುವರೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next