Advertisement

Bellary Jail; ದರ್ಶನ್‌ ಗೆ ಯಾವುದೇ ವಿಶೇಷ ಸೌಲಭ್ಯ ಕೊಟ್ಟಿಲ್ಲ: ಡಿಐಜಿ ಶೇಷಾ

03:30 PM Aug 31, 2024 | Team Udayavani |

ಬಳ್ಳಾರಿ: ದರ್ಶನ್ (Darshan) ಅವರಿಗೆ ಜೈಲಿನಲ್ಲಿ ಯಾವುದೇ ವಿಶೇಷ ಸೌಲಭ್ಯ ಕೊಟ್ಟಿಲ್ಲ. ಜೈಲಿನ ನಿಯಮಗಳ ಪ್ರಕಾರ ಸೌಲಭ್ಯ ಕೊಡಲಾಗಿದೆ ಎಂದು ಡಿಐಜಿ ಶೇಷಾ ಹೇಳಿದರು.

Advertisement

ಬಳ್ಳಾರಿ ಜೈಲು ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈ ಸೆಕ್ಯೂರಿಟಿ ಸೆಲ್ ನಲ್ಲೇ ದರ್ಶನ್ ರನ್ನು ಇಡಲಾಗಿದೆ. ಹೈ ಸೆಕ್ಯೂರಿಟಿ ಸೆಲ್ ನಲ್ಲಿರುವ 16 ಸಾಲಿನಲ್ಲಿ 15ನೇ ಸಾಲಿನಲ್ಲಿ ದರ್ಶನ್ ಇದ್ದಾರೆ. ಇತರೆ ನಾಲ್ಕು ಖೈದಿಗಳಿದ್ದಾರೆ. ಅವರು ವಿವಾದಾತ್ಮಕ ಕೈದಿ ಹಿನ್ನೆಲೆಯಲ್ಲಿ ಅಲ್ಲೇ ಇದ್ದಾರೆ. ಒಂದೊಂದು ಸೆಲ್ ನಲ್ಲಿ ಒಬ್ಬೊಬ್ಬರೇ ಇರುವುದು. ಭದ್ರತೆ ದೃಷ್ಟಿಯಿಂದ ಈ ಹೈಸೆಕ್ಯೂರಿಟಿ ಸೆಲ್ ಗಳನ್ನು ಬಳಕೆ ಮಾಡುತ್ತೇವೆ ಎಂದರು.

ಇಲ್ಲಿರುವುದು ಇಂಡಿಯನ್ ಟಾಯ್ಲಟ್. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಸರ್ಜಿಕಲ್ ಚೇರ್ ಕೇಳಿದ್ದಾರೆ. ಬೆನ್ನು ನೋವಿನ ಕಾರಣದಿಂದ ಟಾಯ್ಲಟ್ ಗೆ ಹೋಗಲಾಗುತ್ತಿಲ್ಲ. ವೈದ್ಯರ ವರದಿಯ ಬಳಿಕ ಸರ್ಜಿಕಲ್ ಚೇರ್ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

Advertisement

ಕೈ ನೋವಿನ ಬಗ್ಗೆ ಹೇಳಿದ್ದಾರೆ. ಟಿವಿ ಬೇಕು ಎಂದು ಕೇಳಿಲ್ಲ, ಕೇಳಿದರೆ ನಮ್ಮ ಪರಮಾಧಿಕಾರ ಬಳಕೆ ಮಾಡಿಕೊಂಡು ಕೊಡುತ್ತೇವೆ ಎಂದಿ ಡಿಐಜಿ ಹೇಳಿದರು.

ಕುಟುಂಬದ ಸದಸ್ಯರು ಮತ್ತು ವಕೀಲರಿಗೆ ಬಿಟ್ಟರೆ ಯಾರಿಗೂ ಭೇಟಿಗೆ ಅವಕಾಶ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next