Advertisement

Bellary Jail; ದರ್ಶನ್ ಭೇಟಿಯಾಗಿ ಕಣ್ಣೀರಿಟ್ಟ ಪತ್ನಿ ವಿಜಯಲಕ್ಷ್ಮೀ

05:52 PM Aug 31, 2024 | Team Udayavani |

ಬಳ್ಳಾರಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ದರ್ಶನ್(Darshan) ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ(Bellary Jail) ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆದ ಬಳಿಕ ಪತ್ನಿ ವಿಜಯಲಕ್ಷ್ಮೀ ಭೇಟಿ ಮಾಡಿ ಕ್ಷೇಮ ವಿಚಾರಿಸಿದ್ದಾರೆ.

Advertisement

ಶನಿವಾರ (ಆ 31) ರಂದು ಜೈಲಿಗೆ ಆಗಮಿಸಿದ ವಿಜಯಲಕ್ಷ್ಮೀ ಅವರ ಬಳಿ ಮಾತನಾಡಲು ದರ್ಶನ್ ಅವರನ್ನು ಸಂದರ್ಶಕರ ಕೊಠಡಿಗೆ ಕರೆದುಕೊಂಡು ಬಂದ ಸಿಬಂದಿಗಳು ಮಾತನಾಡಲು ಅವಕಾಶ ಮಾಡಿ ಕೊಟ್ಟರು. ಕೈದಿಗಳನ್ನ ಭೇಟಿ ಮಾಡುವ ಕೊಠಡಿಯಲ್ಲಿ ದರ್ಶನ್ ನೋಡಿ ಪತ್ನಿ ಕಣ್ಣೀರು ಹಾಕಿದ್ದಾರೆ.

ಜೈಲು ಸಿಬಂದಿ ಸಂಜೆ 4.38 ಕ್ಕೆ ಭೇಟಿಗೆ ಅವಕಾಶ ಕೊಟ್ಟಿದ್ದು, ಹದಿನೈದು ನಿಮಿಷ ಜೈಲಿನ ಕೊಠಡಿಯಲ್ಲಿ ವಿಜಯಲಕ್ಷ್ಮೀ ಕುಳಿತಿದ್ದರು ಎಂದು ತಿಳಿದು ಬಂದಿದೆ.

ವಿಜಯಲಕ್ಷ್ಮೀ ಮತ್ತು ವಕೀಲರು ಕೇಸ್ ನ ಪ್ರತಿ ಹಂತದ ಬಗ್ಗೆ ಮಾಹಿತಿ ಕೊಟ್ಟು ದರ್ಶನ್ ಗೆ ಧೈರ್ಯ ತುಂಬಿದ್ದಾರೆ. ಬಟ್ಟೆ ಮತ್ತು ತಿಂಡಿಯನ್ನು ವಿಜಯಲಕ್ಷ್ಮೀ ಅವರು ತೆಗೆದುಕೊಂಡು ಹೋಗಿದ್ದರು. ಅದನ್ನು ಸಂಪೂರ್ಣವಾಗಿ ಪರಿಶೀಲಿಸಿ ಸಿಬಂದಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next