Advertisement

ಸಾವಿನಲ್ಲೂ ಒಂದಾದ ಬಳ್ಳಾರಿ ರೈತ ದಂಪತಿ

10:28 PM Oct 08, 2019 | Team Udayavani |

ಬಳ್ಳಾರಿ: ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ರೈತಾಪಿ ಕುಟುಂಬದ ದಂಪತಿ ಮಂಗಳ ವಾರ ಸಾವಿನಲ್ಲೂ ಒಂದಾಗಿದ್ದಾರೆ. ಕೊಟ್ಟೂರುಸ್ವಾಮಿ ಮಠದ ಬಳಿಯ ನಿವಾಸಿ ಕಟ್ಟೆಬಸಪ್ಪ (60) ಅವರು ಹಬ್ಬದ ದಿನವಾದ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಪತಿ ಸಾವಿನ ಶೋಕದಲ್ಲಿ ಪತ್ನಿ ಈರಮ್ಮ (52)ಅವರು ಅಳುತ್ತಲೇ ಕೊನೆ ಯುಸಿರೆಳೆದಿದ್ದಾರೆ.

Advertisement

ಹಲವು ದಿನಗಳಿಂದ ಕಟ್ಟೆಬಸಪ್ಪನವರು ಅನಾರೋಗ್ಯದಿಂದ ಬಳಲುತ್ತಿ ದ್ದರು. ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಮಂಗಳವಾರ ಕೊನೆಯುಸಿರೆಳೆದರು. ಮೃತ ದಂಪತಿಗೆ ಪುತ್ರರು, ಪುತ್ರಿಯರು ಇದ್ದಾರೆ. ಈ ಘಟನೆಯಿಂದಾಗಿ ವಿಜಯದಶಮಿ ಸಂಭ್ರಮದಲ್ಲಿದ್ದ ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ.

Advertisement

Udayavani is now on Telegram. Click here to join our channel and stay updated with the latest news.

Next