Advertisement

ಬೆಳಗಾವಿ: ಸಿಡಿಲ ಅಬ್ಬರಕ್ಕೆ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವು

08:00 PM Oct 20, 2020 | Mithun PG |

ಬೆಳಗಾವಿ: ಸಿಡಿಲ ಅಬ್ಬರಕ್ಕೆ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನಪ್ಪಿರುವ ದುರ್ಘಟನೆ ಮಂಗಳವಾರ ಬೆಳಗಾವಿ ಜಿಲ್ಲೆಯ ಚಿಕ್ಕ ಉಳ್ಳಿಗೇರಿಯಲ್ಲಿ ನಡೆದಿದೆ.

Advertisement

ಸವದತ್ತಿ ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದ ಮಲ್ಲವ್ವ ವಿಠ್ಠಲ್ ಇಂಚಲ (36) ಬಾಗವ್ವ ಮಾದೇವಪ್ಪ ಕಡಕೋಳ (55) ಇಬ್ಬರು ಮೃತ ದುರ್ದೈವಿಗಳು, ಇನ್ನೋರ್ವ ಮಹಿಳೆ ರೇಣವ್ವ ಗದಿಗೆಪ್ಪ (45) ಇವರಿಗೆ ಗಂಭೀರ ಗಾಯಗಳಾಗಿದ್ದು, ಇನಾಮಹೊಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮದ ಹೊಲದ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.   ಮತ್ತೊಂದೆಡೆ ನವಿಲು ತೀರ್ಥದಲ್ಲಿ ಸಿಡಿಲಿನ ಹೊಡೆತಕ್ಕೆ ಸಿಲುಕಿ 47 ಕುರಿಗಳು ಬಲಿಯಾಗಿವೆ.

ಇದನ್ನೂ ಓದಿ: ಉದಯವಾಣಿ ವರದಿಗೆ ಸ್ಪಂದನೆ: ಅಂಧ ಸಹೋದರಿಯರನ್ನು ಕರೆಸಿ ಕುಶಲೋಪರಿ ವಿಚಾರಿಸಿದ‌ ಪವರ್ ಸ್ಟಾರ್

ಘಟನಾ ಸ್ಥಳಕ್ಕೆ ಶಾಸಕ, ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.     ತಹಶೀಲ್ದಾರ್ ಪ್ರಶಾಂತ್ ಬಿ ಪಾಟೀಲ ಪಿಎಸ್‍ಐ ಬಸನಗೌಡ ಕಟ್ಟಿಮನಿ ಹಾಜರಿದ್ದರು

Advertisement

ಇದನ್ನೂ ಓದಿ: ಕೋವಿಡ್ 19: ಮೈಮರೆಯಬೇಡಿ…ಲಾಕ್ ಡೌನ್ ತೆರವುಗೊಂಡಿದೆ, ವೈರಸ್ ಇನ್ನೂ ಇದೆ: ಮೋದಿ

Advertisement

Udayavani is now on Telegram. Click here to join our channel and stay updated with the latest news.

Next