Advertisement

ಟನ್‌ಗಟ್ಟಲೆ ಹಿಮ ಬಿದ್ದರೂ ಬದುಕಿ ಬಂದ ಬೆಳಗಾವಿಯ ವೀರ ಯೋಧರು 

09:18 AM Jan 27, 2017 | Team Udayavani |

ಶ್ರೀನಗರ: ಕಾಶ್ಮೀರದ ಗುರೇಜ್‌ ವಲಯದಲ್ಲಿ ಸಂಭವಿಸಿದ  ಭಾರಿ ಹಿಮಪಾತದಲ್ಲಿ ಸಿಲುಕಿದ್ದ ಇಬ್ಬರು ಕನ್ನಡಿಗ ಯೋಧರು ಪವಾಡ ಸದೃಶವಾಗಿ ಬದುಕಿ ಬಂದಿದ್ದಾರೆ. 

Advertisement

ಬುಧವಾರ ಬೆಳಗ್ಗೆ ಸಂಭವಿಸಿನ ಭಾರಿ ಹಿಮಪಾತದ ವೇಳೆ ಸೇನಾ ಬಂಕರ್‌ನೊಳಗೆ ಸಿಲುಕಿದ್ದ ಬೆಳಗಾವಿಯ ಯೋಧ ಮೇಜರ್‌ ಶ್ರೀಹರಿ ಕುಗಜಿ ಮತ್ತು ಬಂಡಿವಡ್ಡರ್‌ ಅವರ ಮೇಲೆ  ಟನ್‌ಗಟ್ಟಲೆ ಹಿಮದ ಗಡ್ಡೆಗಳು ಬಿದ್ದಿವೆ. 

ಹಿಮದಲ್ಲಿ ಹೂತು ಹೋಗಿ ಸಾವಿನ ದವಡೆಗೆ ಸಿಲುಕಿದ್ದ ಇಬ್ಬರನ್ನೂ ಯೋಧರು ಕಾರ್ಯಾಚರಣೆ ನಡೆಸಿ ರಕ್ಷಿಸಿ ಸೇನಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. 

ಮೇಜರ್ ಶ್ರೀಹರಿ ಕುಗಜಿ

ಬೆಳಗಾವಿಯ ಸೇನಾ ಬೆಟಾಲಿಯನ್‌ನ  ಮೇಜರ್ ಶ್ರೀಹರಿ ಕುಗಜಿ  115ನೇ  ಮಹರ್ ಬೆಟಾಲಿಯನ್ಗೆ  3 ತಿಂಗಳ ಹಿಂದೆಯಷ್ಟೇ ವರ್ಗಾವಣೆ ಯಾಗಿದ್ದರು. ಶ್ರೀಹರಿ ಅವರ ತಂದೆಯೂ ಸೇನೆಯಲ್ಲಿ ಸುಬೇದಾರ್‌ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಸಹೋದರಿ ಪಂಕಜಾ ಅವರು ಮೇಜರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

ಕಳೆದ 3 ದಿನಗಳ ಒಳಗೆ ಕಾಶ್ಮೀರದಲ್ಲಿ  ಹಿಮಪಾತಗಳಿಂದ ಮೃತರಾದ ಯೋಧರ ಸಂಖ್ಯೆ 11ಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next