Advertisement

ಹಣಕ್ಕಾಗಿ ಬೆದರಿಕೆ; ಇಬ್ಬರ ಬಂಧನ

06:20 AM Jun 21, 2020 | Suhan S |

ಬೆಳಗಾವಿ: ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಹಾಗೂ ಬಿಲ್ಡರ್‌ಗಳಿಗೆ ಹಣಕ್ಕಾಗಿ ಜೀವ ಬೆದರಿಕೆ ಹಾಕುತ್ತಿದ್ದ ಇಬ್ಬರು ರೌಡಿಗಳನ್ನು ಖಡೇಬಜಾರ್‌ ಪೊಲೀಸರು ಬಂಧಿಸಿದ್ದಾರೆ.

Advertisement

ಬೈಲಹೊಂಗಲ ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದ, ಹಾಲಿ ಬೆಳಗಾವಿ ಶಾಸ್ತ್ರಿ ನಗರದ ನಿವಾಸಿ ವಿಶಾಲಸಿಂಗ್‌ ವಿಜಯಸಿಂಗ್‌ ಚವಾಣ ಹಾಗೂ ಶಾಸ್ತ್ರಿ ನಗರದ ಪ್ರಥಮೇಶ ನಾರಾಯಣ ಗಣಿಕೊಪ್ಪ ಎಂಬುವವರನ್ನು ಬಂಧಿಸಲಾಗಿದೆ. ಶ್ರೀಮಂತ ವ್ಯಾಪಾರಸ್ಥರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಈ ಬಗ್ಗೆ ಕ್ಯಾಂಪ್‌ ಪೋಲೀಸ್‌ ಠಾಣೆ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ 8ಕ್ಕೂ ಹೆಚ್ಚು ಪ್ರಕರಣಗಲ್ಲಿ ಭಾಗಿಯಾಗಿದ್ದಾರೆ. ಸುಪಾರಿ ಪಡೆದು ಹೆದರಿಸುವ ಕಾಯಕ ಮಾಡಿಕೊಂಡಿದ್ದ ಈ ಇಬ್ಬರಿಂದ ಮಾರಕಾಸ್ತ್ರಗಳು, ಮೊಬೈಲ್‌ ಹಾಗೂ ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಇಬ್ಬರೂ ರೌಡಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಖಡೇಬಜಾರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next