Advertisement

ಕಾಂಗ್ರೆಸ್‌ ಬಡವರ ಪರ: ಎಂಬಿಪಿ

03:38 PM Apr 07, 2021 | Team Udayavani |

ರಾಮದುರ್ಗ: ಅಚ್ಛೆ ದಿನ್‌ ಆಯೇಂಗೆ ಎಂದು ಹೇಳುತ್ತಿರುವ ಕೇಂದ್ರ ಸರಕಾರ ಸಾಮಾನ್ಯ ಜನತೆಗೆ ಬೆಲೆ ಏರಿಕೆಯಂತಹ ಆಘಾತಕಾರಿ ಕೊಡುಗೆ ನೀಡಿದೆ. ಅವರ ಒಳ್ಳೆಯ ದಿನಗಳು ಅವರ ಹತ್ತಿರವೇ ಇರಲಿ,ಬಡವರ ಪರವಾದ ಮೊದಲಿನ ಕಾಂಗ್ರೆಸ್‌ ಆಡಳಿತದ ದಿನಗಳೇ ಬೇಕಾಗಿದ್ದು, ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರಿಗೆ ತಮ್ಮ ಅಮೂಲ್ಯ ಮತ ನೀಡಿ ಅವರನ್ನು ಆಯ್ಕೆ ಮಾಡುವಲ್ಲಿ ಮತದಾರಪ್ರಭುಗಳು ಮುಂದಾಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಎಂ.ಬಿ. ಪಾಟೀಲ ಮನವಿ ಮಾಡಿದರು.

Advertisement

ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರಪ್ರಚಾರಾರ್ಥವಾಗಿ ತಾಲೂಕಿನ ಗೊಡಚಿ, ಕಟಕೋಳ, ಹಲಗತ್ತಿ, ಬನ್ನೂರ ಗ್ರಾಮಪಂಚಾಯತಿ ವ್ಯಾಪ್ತಿಸೇರಿದಂತೆ ಸುತ್ತಮುತ್ತನಲಿನಗ್ರಾಮಗಳಲ್ಲಿ ಏರ್ಪಡಿಸಿದ ರೋಡ್‌ ಶೋ ಹಾಗೂ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಅಶೋಕ ಪಟ್ಟಣ ಅವರ ನೇತೃತ್ವದಲ್ಲಿ 30 ಸಾವಿರ ಏಕರೆ ನೀರಾವರಿ ಅಭಿವೃದ್ಧಿಗೆ ಸರಕಾರಅನುದಾನ ನೀಡಿದೆ. ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಅಭಿವೃದ್ಧಿಯಾಗಿದೆ ಎಂದರು. ಅಭ್ಯರ್ಥಿ ಸತೀಶ ಜಾರಕಿಹೊಳಿ ಮಾತನಾಡಿ, ಕಳೆದ ನಾಲ್ಕು ಬಾರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದೀರಿ. ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ತಮ್ಮ ಗೆಲವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಅಶೋಕ ಪಟ್ಟಣ, ಮಹಿಳಾ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿವೀಣಾ ಕಾಶಪ್ಪನವರ ಮಾತನಾಡಿದರು.ಚಿಕ್ಕೋಡಿ ಮಾಜಿ ಸಂಸದ ಪ್ರಕಾಶ ಹುಕ್ಕೇರಿ,ಜಿ.ಪಂ ಸದಸ್ಯ ಜಹೂರ ಹಾಜಿ, ಸ್ಥಳೀಯಮುಖಂಡರಾದ ಬಸವರಾಜ ಹಿರೇರಡ್ಡಿ,ರಾಮಣ್ಣ ಬೀಡಕಿ, ಪಿ.ಎಂ. ಜಗತಾಪ, ಬಸವರಾಜಪ್ಯಾಟಿಗೌಡ್ರ, ಪರ್ವತಗೌಡ ಪಾಟೀಲ, ಸಿ.ಬಿ. ಪಾಟೀಲ, ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next