Advertisement

Belagavi session ಎರಡು ದಿನದಲ್ಲಿ ತೀರ್ಮಾನ: ಯು.ಟಿ. ಖಾದರ್‌

08:05 PM Oct 22, 2023 | Shreeram Nayak |

ಶಿವಮೊಗ್ಗ: ಎರಡು ದಿನಗಳಲ್ಲಿ ಬೆಳಗಾವಿಯಲ್ಲಿ ಅ ಧಿವೇಶನ ನಡೆಸುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಸಭಾಪತಿ ಯು.ಟಿ. ಖಾದರ್‌ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಚಳಿಗಾಲದ ಅ ಧಿವೇಶನ ಮಾಡಬಾರದೆಂಬ ಕುರಿತು ಇನ್ನೂ ತೀರ್ಮಾನ ಮಾಡಿಲ್ಲ. ಈ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ. ಮುಂದಿನ ಎರಡು ದಿನಗಳಲ್ಲಿ ಅ ಧಿವೇಶನದ ಬಗ್ಗೆ ತೀರ್ಮಾನಿಸಲಾಗುವುದು. ಎಷ್ಟು ದಿನ ಅಧಿ ವೇಶನ ನಡೆಯಲಿದೆ ಎಂದು ಸರ್ಕಾರ ತೀರ್ಮಾನಿಸಲಿದೆ. ನಾನು ಹಾಗೂ ಪರಿಷತ್‌ ಸಭಾಪತಿಗಳು ತೆರಳಿ ಅ ಧಿವೇಶನದ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಈ ಬಗ್ಗೆ ಬೆಳಗಾವಿ ಜಿಲ್ಲಾ ಧಿಕಾರಿ ಬಳಿ ಮಾತನಾಡಿದ್ದೇನೆ.

ನಾನು 6ನೇ ಕ್ಲಾಸ್‌ನಿಂದ ಯೋಗಾಸನ ಮಾಡಿಕೊಂಡು ಬಂದಿದ್ದೇನೆ. ಆಗಿನಿಂದಲೂ ನನಗೆ ಯೋಗದ ಪರಿಚಯವಿದೆ. ನನ್ನ ತಾಯಿಯವರ ತಂದೆ ಹಾಗೂ ನನ್ನ ಅಜ್ಜ ಯೋಗ ಗುರುವಿಗೆ ಕರೆ ತರುತ್ತಿದ್ದರು. ಎಲ್ಲರೂ ಯೋಗಾಸನ ಮಾಡಬೇಕು. ಯೋಗಾಸನ ಆರೋಗ್ಯಕ್ಕೆ ಒಳ್ಳೆಯದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next