Advertisement

Belagavi; ದೇಶದ ಜನರು ಅನ್ಯಾಯದ ಕಾಲ ನೋಡುತ್ತಿದ್ದಾರೆ: ಹರಿಪ್ರಸಾದ್ ಟೀಕೆ

03:05 PM Apr 12, 2024 | Team Udayavani |

ಬೆಳಗಾವಿ: ಅಬ್ ಕಿ ಬಾರ್ ಎನ್ ಡಿಎ 400 ಪಾರೋ ಅಥವಾ 420 ನೋ ಗೊತ್ತಿಲ್ಲ. ಈಗಲೇ 400 ರಿಂದ 370 ಕ್ಕೆ ಬಂದಿದ್ದಾರೆ. ಚುನಾವಣೆ ವೇಳೆಗೆ ಇನ್ನೂ ಕೆಳಗೆ ಬರುತ್ತಾರೆ ಎಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ ವ್ಯಂಗ್ಯವಾಡಿದರು.

Advertisement

ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ನಮ್ಮ ಮುಖ್ಯ ಗುರಿ. ಪ್ರಧಾನಿ ಮೋದಿ ಮತ್ತು ಬಿಜೆಪಿ ದುರಾಡಳಿತ, ದೌರ್ಜನ್ಯ ಹಾಗೂ ದಬ್ಬಾಳಿಕೆ ವಿರುದ್ಧ ನಮ್ಮ ಹೋರಾಟ ನಡೆದಿದೆ ಎಂದರು.

ಕಳೆದ 10 ವರ್ಷಗಳ ಅವಧಿಯಲ್ಲಿ ಮೋದಿ ಆಡಳಿತದಿಂದ ಅಮೃತ ಕಾಲ ಬಂದಿಲ್ಲ. ಬದಲಾಗಿ ದೇಶದ ಜನರು ಅನ್ಯಾಯದ ಕಾಲ ನೋಡಿದ್ದಾರೆ. ನಾವು ಈ ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯದ ಕಾಲ ತರುತ್ತಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next