Advertisement

ಮಕ್ಕಳೆದುರೇ ಪತ್ನಿಯನ್ನು ಕೊಂದು ಠಾಣೆಗೆ ಶರಣಾದ ಪತಿ

11:36 PM Dec 18, 2020 | mahesh |

ಬೆಳಗಾವಿ: ಹೆಂಡತಿ ಮೇಲೆ ಅನುಮಾನ ಪಟ್ಟು ಮೂವರು ಮಕ್ಕಳೆದುರೇ ಹೆಂಡತಿಯ ಹೊಟ್ಟೆಗೆ ಚಾಕು ಇರಿದು ಕೊಲೆ ಮಾಡಿ ಪೊಲೀಸರಿಗೆ ಶರಣಾದ ಘಟನೆ ಆಟೋ ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

Advertisement

ಮೂಲತಃ ಸವದತ್ತಿ ತಾಲೂಕಿನ ರಾಮಾಪುರ ತಾಂಡಾ ನಿವಾಸಿ ಸಕ್ಕುಬಾಯಿ ಪುಂಡಲೀಕ ಲಮಾನಿ(35) ಕೊಲೆಗೀಡಾಗಿದ್ದಾಳೆ. ಈಕೆಯ ಪತಿ ಪುಂಡಲೀಕ ಹಣಮಂತ ಲಮಾನಿ ಕೊಲೆ ಮಾಡಿ ಪೊಲೀಸ್ ಠಾಣೆಗೆ ಬಂದು ಶರಣಾಗತಿ ಆಗಿದ್ದಾನೆ.

ಕಳೆದ ಒಂದು ತಿಂಗಳಿಂದ ಜಗಳ ಮಾಡಿಕೊಂಡು ಸಕ್ಕುಬಾಯಿ ತವರು ಮನೆಗೆ ಹೋಗಿದ್ದಳು. ಹಿರಿಯರ ಸಮ್ಮುಖದಲ್ಲಿ ಹೆಂಡತಿ ಜೊತೆಗೆ ಜಗಳ ಮಾಡುವುದಿಲ್ಲ ಅಂತ ಪತಿ ಪುಂಡಲೀಕ ಮಾತು ಕೊಟ್ಟು ಬೆಳಗಾವಿಗೆ ಕರೆ ತಂದಿದ್ದನು. ಸಂಜೆ ಮನೆಗೆ ಬಂದು ಮೂವರು ಮಕ್ಕಳೆದುರೇ ಕೊಲೆ ಮಾಡಿದ್ದು, ಬಿಡಿಸಲು ಬಂದ ಮಗಳ ಕೈಗೂ ಗಾಯವಾಗಿದೆ. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಆರೋಪಿ ಪುಂಡಲೀಕ, ಹತ್ಯೆ ಮಾಡಿ ಆಟೋದಲ್ಲಿ ಠಾಣೆಗೆ ಹೋಗಿ ಹೆಂಡತಿ ಕೊಲೆ ಮಾಡಿರುವುದಾಗಿ ಶರಣಾಗಿದ್ದಾನೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next