Advertisement

ಮಾರುಕಟ್ಟೆ ಇಲ್ಲದೇ ಕಲ್ಲಂಗಡಿ ಹಂಚಿದ ರೈತರು

03:12 PM May 19, 2021 | Team Udayavani |

ಜಗದೀಶ ಎಂ. ಖೊಬ್ರಿ

Advertisement

ತೆಲಸಂಗ: ರಾಜ್ಯದಲ್ಲಿನ ಕೊರೊನಾ ಕರ್ಫ್ಯೂದಿಂದಾಗಿ ರೈತರು ಬೆಳೆದ ಕಲ್ಲಂಗಡಿ ಮಾರಾಟವಾಗದೆ ಅವರು ಜನರಿಗೆ ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಮಾತ್ರವಲ್ಲದೆ ದನಗಳಿಗೆ ಕತ್ತರಿಸಿ ಹಾಕಿದರೂ ಮುಗಿಯದ್ದಕ್ಕೆ ತೋಟದಲ್ಲಿಯೇ ಹಣ್ಣುಗಳು ಕೊಳೆಯುತ್ತಿವೆ. ಆದರೆ ಶ್ರಮ, ಹಣ ಹಾಕಿ ಬೆಳೆದ ಬೆಳೆಗೆ ಲಾಭವಿಲ್ಲದೇ ರೈತರು ಮಾತ್ರ ಕೊರೊನಾ ಎರಡನೆಯ ಅಲೆ ಕಾಲದಲ್ಲೂ ಪರದಾಡುವಂತಾಗಿದೆ.

ಮಾರ್ಚ ತಿಂಗಳಲ್ಲಿ ನಾಟಿ ಮಾಡಿ ಸದ್ಯ ಮಾರಾಟಕ್ಕೆ ಬಂದಿದ್ದ ಕಲ್ಲಂಗಡಿ ಬೆಳೆ ಕರೋನಾ ಕರ್ಫ್ಯೂದಿಂದ ಹೊಲ ಬಿಟ್ಟು ಹೋಗುತ್ತಿಲ್ಲ. ತೆಲಸಂಗ ಹೋಬಳಿ ಒಂದರಲ್ಲಿಯೇ ಸುಮಾರು 40 ಹೆಕ್ಟೇರ್‌ನಷ್ಟು ಕಲ್ಲಂಗಡಿ ಬೆಳೆ ಮಾರಾಟವಾಗದೇ ಹೊಲದಲ್ಲಿಯೇ ಉಳಿದಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಲಾಕ್‌ಡೌನ್‌ ಸಮಯದಲ್ಲಿ ಮಾರಾಟವಾಗದೆ ಅನುಭವಿಸಿದ್ದ ನಷ್ಟವನ್ನು ಪ್ರಸಕ್ತ ವರ್ಷವಾದರೂ ಸರಿದೂಗಿಸಬಹುದೆಂಬ ರೈತರ ಲೆಕ್ಕಾಚಾರ ಬುಡಮೇಲಾಗಿದೆ.

ಲಾಕ್‌ಡೌನ್‌ಗೂ ಮುಂಚೆ ಕೇಜಿಗೆ 10 ರೂ. ದಿಂದ 16 ರೂಪಾಯಿಗೆ ಖರೀದಿ ಮಾಡಿಕೊಳ್ಳುತ್ತಿದ್ದ ದಲ್ಲಾಳಿಗಳು, ಸರಕಾರ ಕರ್ಫ್ಯೂ ಘೋಷಿಸುತ್ತಿದ್ದಂತೆಯೇ ರೈತರತ್ತ ಹೊರಳಿಯೂ ನೋಡುತ್ತಿಲ್ಲ. ಮಾರ್ಚ್‌ ಕೊನೆಗೆ ಹಾಗೂ ಎಪ್ರೀಲ್‌ ಮೊದಲ ಭಾಗದಲ್ಲಿ ಹವಾಮಾನ ವೈಪರೀತ್ಯ ಮತ್ತು ಮಳೆ, ಆಲಿಕಲ್ಲು ಹೊಡೆತಕ್ಕೆ ಅರ್ಧದಷ್ಟು ಕಲ್ಲಂಗಡಿ ಬೆಳೆ ನಷ್ಟವಾಗಿತ್ತು. ಏಪ್ರೀಲ್‌ ಕೊನೆಯ ವಾರ ಮತ್ತು ಮೇ ತಿಂಗಳಲ್ಲಿ ಪ್ರತಿ ವರ್ಷ ಕಲ್ಲಂಗಡಿಗೆ ಹೆಚ್ಚು ಬೆಲೆ ಬರುತ್ತದೆ. ಆಗ ಉಳಿದ ಅರ್ಧದಷ್ಟು ಬೆಳೆ ಮಾರಿ ಖರ್ಚಾದರೂ ಸರಿದೂಗಿಸಬಹುದೆಂಬ ಲೆಕ್ಕಾಚಾರ ರೈತರದಿತ್ತು. ಈಗ ಆ ಆಸೆಯೂ ಕರಗಿ ನೀರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next