ಬೆಳಗಾವಿ: ಪ್ರೇಯಸಿಯನ್ನು ಪ್ರವಾಸಕ್ಕೆ ಕರೆದೊಯ್ದು ಹತ್ಯೆ ಮಾಡಿರುವ ಆರೋಪದಲ್ಲಿ ವೈದ್ಯ ಮತ್ತು ಆತನ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಸುನಿಲ್ ಮತ್ತು ಸಂಜಯ್ ಎನ್ನುವವರಾಗಿದ್ದು, ವರದಿಯಾದಂತೆ ಸಂಜಯ್ ವೃತ್ತಿಯಲ್ಲಿ ವೈದ್ಯನಾಗಿದ್ದು ಪೂನಂ(22) ಎಂಬಾಕೆಯನ್ನು ಪ್ರೀತಿಸುತ್ತಿದ್ದು ಆಕೆ ಮದುವೆಯಾಗುವಂತೆ ಒತ್ತಾಯಿಸಿದ್ದು ಇದಕ್ಕೆ ಜಾತಿ ಅಡ್ಡಿ ಬಂದಿದೆ.
ಪೂನಂಳನ್ನು ಕೊಂದು ಬಿಡಲು ದುರಾಲೋಚನೆ ಮಾಡಿದ ಸಂಜಯ್ ಸಹೋದರ ಸುನಿಲ್ನೊಂದಿಗೆ ಸೇರಿಕೊಂಡು ಸಂಚು ಹೂಡಿ ಗೋವಾ ಪ್ರವಾಸಕ್ಕೆ ಕರೆದೊಯ್ದು ಸೇತುವೆಯೊಂದರ ಬಳಿ ರೈಲಿನಿಂದ ಕೆಳಗೆ ತಳ್ಳಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 15 ರಂದು ಪೂನಂ ಶವ ಅಸ್ಟೋಳಿ ಗ್ರಾಮದ ಸೇತುವೆ ಅಡಿ ನೀರಿನಲ್ಲಿ ಪತ್ತೆಯಾಗಿತ್ತು. ಪೂನಂ ಪೋಷಕರು ಇದು ಕೊಲೆ ಎಂದು ಆರೋಪಿಸಿದ್ದರು.
ತನಿಖೆಗಿಳಿದ ಖಾನಾಪುರ ಠಾಣಾ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.