Advertisement

Chikkamagaluru:ದತ್ತ ಮಾಲಾಧಾರಣೆ ಹಿನ್ನೆಲೆ ಇಂದು ರಾಜ್ಯಾದ್ಯಂತ ಮಾಲಾಧಾರಿಗಳಿಂದ ಭಿಕ್ಷಾಟನೆ

12:06 PM Nov 04, 2023 | Team Udayavani |

ಚಿಕ್ಕಮಗಳೂರು : ದತ್ತ ಮಾಲಾಧಾರಣೆ ಹಿನ್ನೆಲೆ ಇಂದು ರಾಜ್ಯಾದ್ಯಂತ ದತ್ತ ಮಾಲಾಧಾರಿಗಳು ಭಿಕ್ಷಾಟನೆ ನಡೆಸಲಿದ್ದಾರೆ.

Advertisement

ನಗರದ ವಿಜಯಪುರದಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ನೇತೃತ್ವದಲ್ಲಿ 15ಕ್ಕೂ ಹೆಚ್ಚು ದತ್ತ ಮಾಲಾಧಾರಿಗಳಿಂದ ಮನೆಮನೆಗೆ ತೆರಳಿ ಭಿಕ್ಷಾಟನೆ ನಡೆಯಲಿದೆ.

ಭಿಕ್ಷಾಟನೆ ವೇಳೆ ಬಂದ ಪಡಿಯನ್ನು ಬಡವರಿಗೆ ನೀಡಲು ಮಾಲಾಧಾರಿಗಳು ನಿರ್ಧರಿಸಿದ್ದು, ರಾಜ್ಯಾದ್ಯಂತ ಸಂಗ್ರಹವಾಗುವ ಅಕ್ಕಿ, ಬೇಳೆ, ಬೆಲ್ಲ ಸೇರಿದಂತೆ ಎಲ್ಲಾ ವಸ್ತುಗಳನ್ನು ಬಡವರಿಗೆ ನೀಡಲು ನಿರ್ಧರಿಸಲಾಗಿದೆ.

ತಾಲೂಕಿನ ವಿವಾದಿತ ದತ್ತಪೀಠದಲ್ಲಿ ನಾಳೆ ಮಾಲಾಧಾರಿಗಳು ದತ್ತಪಾದುಕೆ ದರ್ಶನ ಮಾಡಲಿದ್ದು, 5000ಕ್ಕೂ ಅಧಿಕ ಮಾಲಾಧಾರಿಗಳು ಸೇರುವ ನೀರಿಕ್ಷೆ ಇದೆ.

ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಮಹಾರಾಷ್ಟ್ರದ ಅಗೋರಿ ವಿವೇಕನಾಥ್ ಜೀ ಭಾಗಿಯಾಗಲಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next