Advertisement
ಬಯಲು ರಂಗಮಂದಿರ ಎದುರು ರಸ್ತೆ ಬದಿ ಉದ್ದಕ್ಕೂ ತ್ಯಾಜ್ಯಗಳು ಚೆಲ್ಲಾಡಿಕೊಂಡು ಬಿದ್ದಿದೆ. ಬೃಹತ್ ಆಕಾರದಲ್ಲಿ ಬೆಳೆದಿದ್ದ ಹುಲ್ಲುಗಳನ್ನು ನಗರಸಭೆ ಸಿಬಂದಿ ಕತ್ತರಿಸಿ ತೆಗೆದಿದ್ದಾರೆ. ಆ ಹುಲ್ಲುಗಳ ನಡುವೆ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯ ಎಸೆದಿರುವುದು ಗಮನಕ್ಕೆ ಬಂದಿದೆ. ದೊಡ್ಡದೊಡ್ಡ ಗಂಟುಗಳಲ್ಲಿ ತ್ಯಾಜ್ಯವನ್ನು ಕಟ್ಟಿ ಇಲ್ಲಿ ಎಸೆಯಲಾಗಿದೆ.
Related Articles
ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬೇಡಿ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ ಒಣಕಸವನ್ನು ಮಾತ್ರ ನೀಡಿ ಎಂದು ಜಿಲ್ಲಾಡಳಿತ, ನಗರಸಭೆ ನಿರಂತರ ಸಲಹೆ, ಸೂಚನೆ ನೀಡುತ್ತಿದೆ.
Advertisement
ಆದರೂ ಕೆಲವು ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳದೆ ನಿಯಮ ಪಾಲಿಸಲು ಹಿಂದೇಟು ಹಾಕುತ್ತಿದ್ದಾರೆ.ನಗರದ ಕೆಲವು ಭಾಗದಲ್ಲಿ ತ್ಯಾಜ್ಯ ಸಮಸ್ಯೆ ಬಗೆಹರಿಸುವುದೇ ಸವಾಲಾಗಿದೆ ಎಂದು ಅಸಾಹಯಕತೆ ವ್ಯಕ್ತಪಡಿಸುತ್ತಾರೆ ನಗರಸಭೆ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ.
ಇದನ್ನೂ ಓದಿ:ಏರ್ಟೆಲ್ ಪ್ರಿ-ಪೇಯ್ಡ್ ಶುಲ್ಕ ಶೇ.25ರ ವರೆಗೆ ಏರಿಕೆ
ದಂಡ ಬಿಸಿ ಮುಟ್ಟಿಸಬೇಕುಸ್ಥಳೀಯರು ಇಲ್ಲಿ ತ್ಯಾಜ್ಯ ಎಸೆಯುವುದಿಲ್ಲ. ಇನ್ನೊಂದು ಏರಿಯಾದಿಂದ ರಾತ್ರಿವೇಳೆ ಕಾರು ಮತ್ತು ಬೈಕ್ಗಳಲ್ಲಿ ಈ ಭಾಗಕ್ಕೆ ಆಗಮಿಸಿ ಕಸ ಎಸೆಯುತ್ತಾರೆ. ಯಾರಿಗೂ ತಿಳಿಯುವುದಿಲ್ಲ ಎಂದು ಹುಲ್ಲು ಬೆಳೆದ ಜಾಗದ ನಡುವೆ ದೊಡ್ಡ ಗಂಟುಗಳಲ್ಲಿ ಕಸ ತಂದು ಸುರಿಯುತ್ತಾರೆ ಎಂದು ಸ್ಥಳೀಯ ಜನರು ದೂರಿದ್ದಾರೆ. ನಗರಸಭೆ ಈ ಭಾಗದಲ್ಲಿ ನಿಗಾವಹಿಸಿ ಕಸ ಎಸೆಯುವರನ್ನು ಪತ್ತೆ ಮಾಡಿ ದಂಡ ವಿಧಿಸಿ ಬಿಸಿ ಮುಟ್ಟಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ನಿಗಾ ವಹಿಸುವಂತೆ ಸೂಚನೆ
ಅಧಿಕಾರಿಗಳು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರನ್ನು ಪತ್ತೆ ಮಾಡಿ ಕಾನೂನು ಪ್ರಕಾರ ದಂಡ ವಿಧಿಸುತ್ತಿದ್ದಾರೆ. ಬೀಡಿನಗುಡ್ಡೆ ವ್ಯಾಪ್ತಿಯಲ್ಲಿಯೂ ನಿಗಾ ವಹಿಸುವಂತೆ ಸೂಚನೆ ನೀಡಲಾಗುವುದು. ಬೀಡಿನಗುಡ್ಡೆ ರಂಗಮಂದಿರ ಸಮೀಪ ರಸ್ತೆ ಬದಿಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿರುತ್ತದೆ. ನಗರದ ಎಲ್ಲ ಕಡೆಗಳಲ್ಲಿ ತ್ಯಾಜ್ಯ ರಾಶಿ ಸೃಷ್ಟಿಯಾಗದಂತೆ ಪೌರಕಾರ್ಮಿಕರು ಶ್ರಮದಿಂದ ಕೆಲಸ ಮಾಡುತ್ತಿದ್ದಾರೆ. ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವರು ಸಾಮಾಜಿಕ ಜವಾಬ್ದಾರಿ ಮರೆತು, ಜವಾಬ್ದಾರಿಯಿಂದ ವರ್ತಿಸದೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುತ್ತಿರುವುದು ವಿಷಾದಕರ.
– ಸುಮಿತ್ರಾ ನಾಯಕ್, ಅಧ್ಯಕ್ಷರು,
ಉಡುಪಿ ನಗರಸಭೆ