Advertisement

“ಹವ್ಯಾಸಿ ರಾಜಕಾರಣಿ ಆಗಿಬಿಟ್ಟೆ’

05:15 AM Jul 21, 2017 | Team Udayavani |

ಚೆನ್ನೈ: ಸೂಪರ್‌ಸ್ಟಾರ್‌ ರಜನೀಕಾಂತ್‌ ಹಾದಿಯಲ್ಲೇ ಹೆಜ್ಜೆ ಇಡುತ್ತಿರುವ ನಟ ಕಮಲ್‌ ಹಾಸನ್‌ ರಾಜಕೀಯ ಪ್ರವೇಶ ಈಗ ಸಾಕಷ್ಟು ಕುತೂಹಲ ಮೂಡಿಸಿದೆ. ಇದೇ ವೇಳೆ, ಆಡಳಿತಾರೂಢ ಎಐಎ ಡಿಎಂಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಖಾರ ವಾದ ಪ್ರತಿಕ್ರಿಯೆಗಳೂ ಬರತೊಡಗಿವೆ.

Advertisement

ಗುರುವಾರ ಈ ಕುರಿತು ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಕಮಲ್‌, “ಹಿಂದಿ ಹೇರಿಕೆ ವಿಚಾರವಾಗಿ ನಾನು ಎಂದು ಖಡಕ್‌ ಆಗಿ ಅಭಿಪ್ರಾಯ ವ್ಯಕ್ತಪಡಿಸಿದೆನೋ ಅಂದೇ ನಾನು ಹವ್ಯಾಸಿ ರಾಜಕಾರಣಿ ಆಗಿಬಿಟ್ಟಿದ್ದೇನೆ’ ಎಂದಿದ್ದಾರೆ. ಇದೇ ವೇಳೆ, ತಮ್ಮ ಮೇಲೆ ಕೆಲವರು ತೆರಿಗೆ ತಪ್ಪಿಸಿಕೊಂಡ ಆರೋಪದ ಮೇಲೆ ನಿಮ್ಮ ಮೇಲೆ ಕಠಿನ ಕ್ರಮ ಕೈಗೊಳ್ಳುವುದಾಗಿ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಅವರ ಇಂಥ ನಡವಳಿಕೆಗೆ ಕೋಪ, ನಗು ಎರಡೂ ಬರುತ್ತದೆ’ ಎಂದಿದ್ದಾರೆ.

ಡಿಎಂಕೆ ಆಹ್ವಾನಕ್ಕೆ ಒಪ್ಪಿಗೆ
ಡಿಎಂಕೆ, ಆ.8ರಂದು ನಡೆಯಲಿರುವ ಪಕ್ಷದ ಮುಖವಾಣಿ ಮುರುಸೊಳಿ ವಜ್ರಮಹೋತ್ಸವಕ್ಕೆ ಕಮಲ್‌ ಹಾಗೂ ರಜನೀಕಾಂತ್‌ಗೆ ಆಹ್ವಾನ ನೀಡಿದ್ದು, ಕಮಲ್‌ ಹಾಸನ್‌ ಆಹ್ವಾನ ಸ್ವೀಕರಿಸಿದ್ದಾರೆ. ಆದರೆ ರಜನೀಕಾಂತ್‌ ಇದರಲ್ಲಿ ಪಾಲ್ಗೊಳ್ಳುತ್ತಾರೆಯೇ ಎನ್ನುವುದಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಕಮಲ್‌ ಹಾಗೂ ರಜನಿ ಇಬ್ಬರೂ ರಾಜಕೀಯ ಪ್ರವೇಶದ ಸುಳಿವು ನೀಡುತ್ತಿರುವ ಹಿನ್ನೆಲೆಯಲ್ಲಿ ಡಿಎಂಕೆ ಕಾರ್ಯಕ್ರಮಕ್ಕೆ ಆಹ್ವಾನಿಸಿ ರಾಜಕೀಯವಾಗಿಯೂ ಲಾಭ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿದೆ. ಎಐಎಡಿಎಂಕೆ ಪಕ್ಷದ ಕೆಲವು ಸಚಿವರ ಜತೆ ಕಮಲ್‌ ಉತ್ತಮ ಬಾಂಧವ್ಯ ಹೊಂದಿಲ್ಲ, ಹೀಗಾಗಿ ಅವರೆಲ್ಲರಿಗೂ ಬಿಸಿ ತಟ್ಟಿಸುವ ಉದ್ದೇಶ ಕಮಲ್‌ರದ್ದು ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next