Advertisement

ಮಳೆಗೆ ಮಣ್ಣು ಕುಸಿದು ರಸ್ತೆಗೆ ಬಿದ್ದ ಬಂಡೆಗಳು

06:51 PM Oct 13, 2021 | Team Udayavani |

ತುಮಕೂರು: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ದೇವರಾಯನದುರ್ಗದಲ್ಲಿ ಮಳೆಯಿಂದ ಬೆಟ್ಟದಲ್ಲಿದ್ದ ಮಣ್ಣು ಕುಸಿದು ಬೆಟ್ಟದ ಮೇಲಿದ್ದ ದೊಡ್ಡ ದೊಡ್ಡ ಬಂಡೆಗಳು ರಸ್ತೆಗೆ ಬಿದ್ದಿದ್ದು, ರಸ್ತೆಯಲ್ಲಿ ಸಂಚರಿಸುವ ಪ್ರವಾಸಿಗರಿಗೆ ತೊಂದರೆಯಾಗಿತ್ತು.

Advertisement

ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಮಳೆಯ ನೀರು ರಭಸವಾಗಿ ಹರಿದಿರುವುದರಿಂದ ಬೆಟ್ಟದ ಮಣ್ಣು ನೆನೆದು ಮಣ್ಣು ಕುಸಿತ ಉಂಟಾಗಿದೆ. ಮಣ್ಣು ಕುಸಿತ ಉಂಟಾದ ತಕ್ಷಣ ಬೆಟ್ಟದ ಮೇಲಿದ್ದ ದೊಡ್ಡ ಬಂಡೆಗಳು ಉರುಳಿ ರಸ್ತೆಗೆ ಬಿದ್ದಿವೆ. ಈ ವೇಳೆ ಬೆಟ್ಟದಲ್ಲಿ ನಿಲ್ಲಿಸಿದ್ದ ಕಲವು ವಾಹನಗಳಿಗೆ ತೊಂದರೆಯಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ;- ಶ್ರೀಕಲ್ಲೇಶ್ವರ ದೇಗುಲದ ಹುಂಡಿ ಕಳವು

ದೇವರಾಯನದುರ್ಗ ಬೆಟ್ಟದ ಮೇಲಿನ ಪೊಲೀಸ್‌ ಚೆಕ್‌ ಪೋಸ್ಟ್‌ ಬಳಿ ಬಂಡೆಗಳು ಉರುಳಿ ಬಿದ್ದಿವೆ. ಇದರಿಂದಾಗಿ ಭೋಗನರಸಿಂಹ ಸ್ವಾಮಿ ದೇವಸ್ಥಾನಕ್ಕೆ ತೆರಳುವ ರಸ್ತೆ ಬಂದ್‌ ಆಗಿದೆ. ಬಂಡೆಗಳನ್ನು ಮಣ್ಣನ್ನು ತೆರವು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆದಿದೆ ಎಂದು ತಹಶೀಲ್ದಾರ್‌ ಮೋಹನ್‌ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next