Advertisement

ತುಮಕೂರಿನಲ್ಲಿ ಸೆರೆ ಸಿಕ್ಕ ಕರಡಿ ಬನ್ನೇರುಘಟ್ಟದಲ್ಲಿ ಪರಾರಿ!

10:56 PM Mar 28, 2021 | Team Udayavani |

ತುಮಕೂರು/ಆನೇಕಲ್: ತುಮಕೂರಿನಲ್ಲಿ ಬೋನಿಗೆ ಬಿದ್ದ ಕರಡಿಯೊಂದು ಬನ್ನೇರು ಘಟ್ಟ ರಾಷ್ಟ್ರೀಯ ಉದ್ಯಾನದ ಬಳಿ ಪರಾರಿಯಾಯಿತು!

Advertisement

ತುಮಕೂರು ಸಿದ್ಧಗಂಗಾ ಮಠದ ಬಳಿ ಕರಡಿ ಸಂಚಾರದ ಕುರಿತು ಅರಣ್ಯಾಧಿಕಾರಿಗಳಿಗೆ ಎರಡು ತಿಂಗಳ ಹಿಂದೆಯೇ ಮಾಹಿತಿ ದೊರಕಿತು ಹಾಗೂ ವೀಡಿಯೋಗಳು ವೈರಲ್‌ ಆಗಿ ಆತಂಕ ಮೂಡಿಸಿತ್ತು. ಹೀಗಾಗಿ ಕರಡಿ ಸೆರೆ ಹಿಡಿಯಲು ಬೋನು ಇಡಲಾಗಿತ್ತು. ಶನಿವಾರ ರಾತ್ರಿ ಬೋನಿಗೆ ಬಿದ್ದ ಕರಡಿಯನ್ನು ರವಿವಾರ ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ಬನ್ನೇರುಘಟ್ಟ ಉದ್ಯಾನಕ್ಕೆ ಕರೆದೊಯ್ದಿದ್ದರು.

ಕರಡಿಯು ಬೋನಿನ ತಳ ಭಾಗದ ಕಬ್ಬಿಣದ ಶೀಟ್‌ ಅನ್ನು ಮುರಿದಿದ್ದು, ಅದರ ಮೂಲಕ ಹೊರ ಬಂದಿದ್ದು, ಎದುರಿಗಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನದ ವೈದ್ಯರ ವಾಹನದ ಚಾಲಕ ಜಯಶಂಕರ್‌(54) ಮೇಲೆ ದಾಳಿ ನಡೆಸಿ ಪರಾರಿಯಾಗಿದೆ.

ಕರಡಿಗಾಗಿ ಹುಡುಕಾಟ
ಕರಡಿ ಉದ್ಯಾನ ಸಮೀಪದ ಹುಚ್ಚನ ಕೆರೆ ಸಮೀಪ ಅಡಗಿರುವ ಸಾಧ್ಯತೆ ಇದ್ದು, ಎರಡು ತಂಡಗಳ ಮೂಲಕ ಕೂಂಬಿಂಗ್‌ ಮಾಡಲಾಗುತ್ತಿದೆ. ಜನ ಓಡಾಡುವ ಜಾಗದಲ್ಲಿ ಭದ್ರತೆ ಸಲುವಾಗಿ ಹೆಚ್ಚಿನ ಸಿಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ :ಕಂಬಳದಲ್ಲಿ ಮತ್ತೊಂದು ದಾಖಲೆ : 8.78 ಸೆಕೆಂಡ್ ನಲ್ಲಿ ಓಡಿ ದಾಖಲೆ ಬರೆದ ಶ್ರೀನಿವಾಸ ಗೌಡ

Advertisement

ಬೋನಿನ ಕೆಳಭಾಗದ ಶೀಟ್‌ ಕಿತ್ತಿತ್ತು
ತುಮಕೂರಿನಿಂದ ಬನ್ನೇರುಘಟ್ಟಕ್ಕೆ ತರುವ ಮಾರ್ಗ ಮಧ್ಯದಲ್ಲೇ ಬೋನಿನ ಕೆಳಭಾಗದಲ್ಲಿ ಇದ್ದ ಕಬ್ಬಿಣದ ಶೀಟನ್ನು ಕೀಳಲು ಪ್ರಯತ್ನಿಸಿ ಸಡಿಲ ಮಾಡಿತ್ತು. ವಾಹನದಿಂದ ಬೋನನ್ನು ಕೆಳಗಿಳಿಸುವ ಸಂದರ್ಭದಲ್ಲಿ ಕರಡಿ ಜಿಗಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next