Advertisement

Bear Attack: ಜಿಮ್ಮು ವಾಗು ತೊರವತ್‌ ಕುಟುಂಬಕ್ಕೆ 15 ಲಕ್ಷ ಪರಿಹಾರ ವಿತರಣೆ

09:05 PM Jul 22, 2023 | Team Udayavani |

ಕಾರವಾರ: ಮುಂಡಗೋಡದ ಮರಗಡಿಯಲ್ಲಿ ಕರಡಿ ದಾಳಿಯಿಂದ ಗುರುವಾರ ರಾತ್ರಿ ಮೃತಪಟ್ಟಿದ್ದ ಜಿಮ್ಮು ವಾಗು ತೊರವತ್‌ (58) ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 15 ಲಕ್ಷ ರೂ.ಪರಿಹಾರವನ್ನು ಶನಿವಾರ ವಿತರಿಸಲಾಗಿದೆ ಎಂದು ಯಲ್ಲಾಪುರ ವಲಯದ ಡಿಸಿಎಫ್ ಎಸ್.ಜಿ.ಹೆಗಡೆ ತಿಳಿಸಿದ್ದಾರೆ.

Advertisement

ಈ ಸಂದರ್ಭದಲ್ಲಿ ಶಾಸಕ ಶಿವರಾಮ್ ಹೆಬ್ಬಾರ್ ಉಪಸ್ಥಿತರಿದ್ದರು. ಜಿಮ್ಮು ವಾಗು ತೊರವತ್‌ ಗೌಳಿ ದೊಡ್ಡಿಯವರು . ಕೃಷಿ ಕೆಲಸಕ್ಕೆ ಹೋಗಿ ಮರಳುವಾಗ ಕರಡಿ ದಾಳಿ ಮಾಡಿತ್ತು. ಇದೇ ಗುರುವಾರ ಸಂಜೆಗತ್ತಲಲ್ಲಿ ಕರಡಿ ದಾಳಿ ಮಾಡಿತ್ತು. ಕುಟುಂಬದವರು ಗ್ರಾಮದವರು ಜಿಮ್ಮುಗಾಗಿ ಹುಡುಕಾಡಿದ್ದರು. ಕರಡಿ ದಾಳಿಯ ಗುರುತು ಜಿಮ್ಮು ಶವದ ಬಳಿ ಇತ್ತು. ಕರಡಿ ದಾಳಿಯಿಂದ ಗ್ರಾಮದಲ್ಲಿ ಭಯದ ವಾತಾವರಣ ಮೂಡಿತ್ತು. ಅರಣ್ಯಾಧಿಕಾರಿಗಳು ಜನರಿಗೆ ಧೈರ್ಯ ತುಂಬಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next