Advertisement
ಗೊತ್ತಾಗಿದ್ದು ಯಾವಾಗ?: ಒಂದೂವರೆ ವರ್ಷದ ಹಿಂದೆ ಜರ್ಮನಿಗೆ ಹೋಗಿದ್ದ ಮಂಜುನಾಥ, ಏಳು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ತಂದೆ ಸಿದ್ದಣ್ಣ ಚೂರಿ ಅವರನ್ನು ಕಳೆದುಕೊಂಡಿದ್ದ. ತಂದೆ ತೀರಿಕೊಂಡಿದ್ದಾಗ ಬಾಗಲಕೋಟೆಗೆಬಂದಿದ್ದ ಆತ, ತಿಂಗಳ ಬಳಿಕ ಮರಳಿ ಹೋಗಿದ್ದ. ಬೀಳಗಿ ಪಟ್ಟಣದ ಗಾಂಧಿನಗರದಲ್ಲಿ ವಾಸವಾಗಿದ್ದ ಚೂರಿ ಕುಟುಂಬ, ತಂದೆಯ ನಿಧನದ ಬಳಿಕ ಸೀಮಿಕೇರಿ ಬಳಿ ಇರುವ ಸೋದರಮಾವನ (ತಾಯಿಯ ತಮ್ಮ) ಮನೆಯ ಪಕ್ಕದಲ್ಲೇ
ಬಾಡಿಗೆ ಮನೆ ಮಾಡಿ, ತಾಯಿಯನ್ನು ಬಿಟ್ಟು ಹೋಗಿದ್ದ. ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ತಾಯಿಗೆ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದ. ಆದರೆ, ರವಿವಾರ ಆತನಿಂದ ಫೋನ್ ಬಂದಿರಲಿಲ್ಲ.
ವ್ಯಾಸಂಗ ಮಾಡುತ್ತಿರುವ ಅನಿಲ ದೇಶಪಾಂಡೆ ಎಂಬಾತ ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದಾನೆ. ಆ ಬಳಿಕ ಅಲ್ಲಿನ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಹಾಗೂ ಪೊಲೀಸರು ಅನಿಲ್ ಮೂಲಕ ಮನೆಗೆ ಫೋನ್ ಮಾಡಿಸಿ, ನಿಮ್ಮ ಪುತ್ರ ಕಾಣುತ್ತಿಲ್ಲ. ಮೂರು ದಿನಗಳಿಂದ ಕಾಣೆಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಆತಂಕದಲ್ಲಿ ಕುಟುಂಬ: ಮಂಜುನಾಥನಿಗೆ ತಾಯಿ ಮಹಾನಂದ ಚೂರಿ, ಹಿರಿಯ ಸಹೋದರಿ ಕವಿತಾ, ಕಿರಿಯ ಸಹೋದರಿ ವಿಜಯಲಕ್ಷ್ಮೀ ಇದ್ದಾರೆ. ಕವಿತಾಳನ್ನು ಮಹಾಲಿಂಗಪುರ ಮತ್ತು ವಿಜಯಲಕ್ಷ್ಮಿಯನ್ನು
ಬಸವನಬಾಗೇವಾಡಿಯ ಮನಗೂಳಿಗೆ ಮದುವೆ ಮಾಡಿಕೊಡಲಾಗಿದೆ. ಸದ್ಯ ತಾಯಿ ಒಬ್ಬರೇ ಸೀಮಿಕೇರಿಯಲ್ಲಿದ್ದು, ಮಂಜುನಾಥ ಕಾಣೆಯಾದ ವಿಷಯ ತಿಳಿದು ಇಬ್ಬರೂ ಸಹೋದರಿಯರು, ಮಾವಂದಿರು ಬಂದಿದ್ದಾರೆ. ಇಡೀ ಕುಟುಂಬ, ಮಂಜುನಾಥನ ಸೋದರ ಮಾವ ಮಲ್ಲಿಕಾರ್ಜುನ ಡೋಮನಾಳ ಅವರ ಮನೆಯಲ್ಲಿದ್ದು, ತೀವ್ರ ದುಃ ಖದಲ್ಲಿದ್ದಾರೆ.
Related Articles
ಮಂಜುನಾಥ ಚೂರಿ ಕಾಣೆಯಾದ ಕುರಿತು ಬಾಗಲಕೋಟೆಯ ಎಸ್ಪಿ, ಸಂಸದ ಗದ್ದಿಗೌಡರ ಅವರಿಗೆ ಕುಟುಂಬದವರು ತಿಳಿಸಿದ್ದಾರೆ. ಟ್ವೀಟ್ ಮೂಲಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪ್ರಧಾನಿ ಮೋದಿ ಅವರ ಗಮನಕ್ಕೆ ತಂದಿದ್ದಾರೆ.
ಬಾಗಲಕೋಟೆಯ ಎಸ್ಪಿ ಸಿ.ಬಿ. ರಿಷ್ಯಂತ ಅವರ ಸಹಪಾಠಿಯೊಬ್ಬರು ಜರ್ಮನಿಯಲ್ಲಿ ಅಧಿಕಾರಿಯಾಗಿದ್ದು, ಅವರ ಮೂಲಕ ಮಂಜುನಾಥನ ಪತ್ತೆಗೆ ಪ್ರಯತ್ನಿಸಿದ್ದಾರೆ.
Advertisement
ವಿದ್ಯಾರ್ಥಿಯ ಚಪ್ಪಲಿ, ಸೈಕಲ್, ಪತ್ರ ಪತ್ತೆ:ಜರ್ಮನಿಯಲ್ಲಿ ನಾಪತ್ತೆಯಾಗಿದ್ದ ಬಾಗಲಕೋಟೆ ವಿದ್ಯಾರ್ಥಿಯ ಸೈಕಲ್, ಚಪ್ಪಲ್ ಹಾಗೂ ಕನ್ನಡದಲ್ಲಿ ಬರೆದಿಟ್ಟಿರುವ ಪತ್ರ ಹ್ಯಾಮ್ಸ್ ಬರ್ಗ್ ನದಿ ಸಮೀಪ ಪತ್ತೆಯಾಗಿರುವುದಾಗಿ ಜರ್ಮನಿಯ ಪೊಲೀಸ್ ಮೂಲಗಳು ತಿಳಿಸಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ.