Advertisement

ನಿರೀಕ್ಷಣಾ ಜಾಮೀನು ನೀಡಿದ್ದಲ್ಲಿ ಎಚ್ಚರ

07:30 AM Aug 14, 2017 | |

ಹೊಸದಿಲ್ಲಿ: “ಯಾವುದೇ ಪ್ರಕರಣದಲ್ಲಿ ಆರೋ ಪಿಗೆ ಉನ್ನತ ನ್ಯಾಯಾಲಯಗಳು ನಿರೀಕ್ಷಣಾ ಜಾಮೀನು ನೀಡಿದ್ದಲ್ಲಿ, ಆಗ ಸ್ಥಳೀಯ ನ್ಯಾಯಾಲಯಗಳು ಏಕಾಏಕಿ ಜಾಮೀನು ಮಂಜೂರು ಮಾಡುವ ಅಭ್ಯಾಸ ನಿಲ್ಲಿಸ ಬೇಕು’ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

Advertisement

ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಆದೇಶ ಪ್ರತಿಯನ್ನು ದೇಶದ ಎಲ್ಲ ನ್ಯಾಯಾಲಯ ಅಕಾಡೆಮಿಗಳ ನಿರ್ದೇಶಕರುಗಳಿಗೆ ರವಾನಿಸಿದೆ. ಅಲ್ಲದೆ, ಆದೇಶ ಪಾಲನೆ ಮಾಡು ವಂತೆ ನಿರ್ದೇಶನ ನೀಡಿದೆ. ಯಾವುದೇ ಪ್ರಕರಣದಲ್ಲಿ ಆರೋಪಿ ಉನ್ನತ ನ್ಯಾಯಾಲಯಗಳಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಲ್ಲಿ ಕೆಳಹಂತದ ನ್ಯಾಯಾಲಯ ಗಳು ಇದನ್ನು ಪರಿಗಣಿಸದೇ ಆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಜಾಮೀನು ನೀಡಬಾರದು. ನಿರೀಕ್ಷಣಾ ಜಾಮೀನು ನೀಡಿದ ಉನ್ನತ ನ್ಯಾಯಾಲಯವೇ ಆ ಪ್ರಕರಣ ಕುರಿತ ತೀರ್ಪು ನೀಡಲಿದೆ ಎಂಬರ್ಥದಲ್ಲಿ ಅಭಿಪ್ರಾಯಪಟ್ಟಿದೆ.

ಝಾರ್ಖಂಡ್‌ನ‌ ವ್ಯಕ್ತಿಯೊಬ್ಬರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ಇಂಥದ್ದೊಂದು ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿತ್ತು. ಇದಕ್ಕೆ ಸಂಬಂಧಿಸಿ ಇದೀಗ ಸುಪ್ರೀಂಕೋರ್ಟ್‌ ಹೀಗೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next