Advertisement

ಬಿ.ಸಿ.ಪಾಟೀಲ್‌ಗೆ ಸಚಿವ ಸ್ಥಾನ ಮಿಸ್‌!; ಪುತ್ರಿ ಆಕ್ರೋಶ 

10:15 AM Dec 22, 2018 | Team Udayavani |

ಬೆಂಗಳೂರು: ಹಿರೇಕೆರೂರು ಕ್ಷೇತ್ರದ ಮೂರು ಬಾರಿಯ ಶಾಸಕ ಬಿ.ಸಿ.ಪಾಟೀಲ್‌ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ಕೈತಪ್ಪಿ ಹೋಗಿದ್ದು, ತೀವ್ರ ಅಸಮಾಧಾನ ಹೊರ ಬಿದ್ದಿದೆ.

Advertisement

ಸಚಿವ ಸ್ಥಾನಕ್ಕೆ ಪಕ್ಷ ಪರಿಗಣಿಸದೆ ಇದ್ದುದಕ್ಕೆ ಬಿ.ಸಿ.ಪಾಟೀಲ್‌ ಅವರ ಪುತ್ರಿ ಶೃಷ್ಠಿ ಪಾಟೀಲ್‌ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬಹುದೊಡ್ಡ ಅನ್ಯಾಯ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಬಿ.ಸಿ.ಪಾಟೀಲ್‌ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದು ನಮ್ಮ ಹಿರೇಕೆರೂರು, ರಟ್ಟೇಹಳ್ಳಿ ತಾಲ್ಲೂಕಿಗೆ ಹಾಗೂ ಬಿ.ಸಿ ಪಾಟೀಲರಿಗೆ ಬಹುದೊಡ್ಡ ಅನ್ಯಾಯ. ಅವರಿಗೆ ಸಚಿವರಾಗಲು ಎಲ್ಲಾ ಅರ್ಹತೆ ಇದ್ದು, ಹಾವೇರಿ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರು , ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಪಕ್ಷ ನಿಷ್ಠೆಯನ್ನು ತೋರಿಸಿದ ಬಿ.ಸಿ ಪಾಟೀಲರಿಗೆ @INCIndia @INCKarnataka ಕಾಂಗ್ರೆಸ್ ಪಕ್ಷ ಸಚಿವ ಸ್ಥಾನ ನೀಡದೇ ಇರುವುದು ಪಕ್ಷ ನಮ್ಮ ತಾಲ್ಲೂಕಿಗೆ ಹಾಗೂ ಬಿ.ಸಿ ಪಾಟೀಲರಿಗೆ ಮಾಡಿದ ಅನ್ಯಾಯ.

Advertisement

Udayavani is now on Telegram. Click here to join our channel and stay updated with the latest news.

Next